ಮಹಾರಾಷ್ಟ್ರ ರಾಜ್ಯದ ಬತ್ತಿ ಶಿರಾಳದಲ್ಲಿ ನಿಜ ನಾಗರ ಹಾವಿಗೆ ಪೂಜೆ ಸಲ್ಲಸಿದ ಜನರು.
ಹೌದು ಇದು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಹತ್ತಿರ ಬತ್ತಿ ಶಿರಾಳ ಗ್ರಾಮದಲ್ಲಲ್ಲಿ ಪ್ರತಿವರ್ಷ ನಾಗರ ಪಂಚಮಿ ಯಂದು ನಿಜ ನಾಗರ ಹಾವಿನೊಂದಿಗೆ ಆಚರಿಸುತ್ತಾರೆ.
ಒಂದು -ಎರೆಡು ದಿನ ಮುಂಚೆ ಕಾಡಿಗೆ ಹೋಗಿ ಸಾವಿರಾರು ಜನರು ನಿಜ ನಾಗರಹಾವನ್ನು ಹಿಡಿದುಕೊಂಡು ಬರುತ್ತಾರೆ, ಎಲ್ಲರೂ ಊರಿನ ಹೊರಭಾಗದಲ್ಲಿ ಸೇರುತ್ತಾರೆ ನಂತರ ಮೆರವಣಿಗೆ ಮೂಲಕ ಬರುತ್ತಾರೆ, ಮಣ್ಣಿನ ಮಡಿಕೆಯಲ್ಲಿ ನಿಜ ಹಾವನ್ನು ತಂದು ಮನೆಯಲ್ಲಿ ಎರಡು ದಿನ ಪೂಜಿಸಿ ಪೂಜಿಸಿ ನಂತರ ಪುನಃ ಕಾಡಿಗೆ ಹೋಗಿ ಬಿಟ್ಟು ಬರುತ್ತಾರೆ,
ವಿಶೇಷವೆಂದರೆ ಈ ಆಚರಣೆಯನ್ನು ನೂರಾರು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಇನ್ನೊಂದು ವಿಶೇಷವೇನೆಂದರೆ, ಇದುವರೆಗೂ ಯಾವ ಹಾವಿಗೂ ಹಿಂಸೆ ತೊಂದರೆ ಆಗಿಲ್ಲಾ, ಈ ಸಮಯದಲ್ಲಿ ಯಾವ ಹಾವುಗಳು ಮನುಷ್ಯರಿಗೆ ಕಡಿಯುವುದಿಲ್ಲ,
ಕಡಿದ ಇತಿಹಾಸವೇ ಇಲ್ಲಾ, ಭಕ್ತಿ, ಭಾವನೆ ನೋಡಲು ಒಮ್ಮೆ ಬತ್ತಿಸ್ ಶಿರಾಳಕ್ಕೆ ಬನ್ನಿ, ಹಾಗೆಯೇ ಊರಿನ ಮೈದಾನದಲ್ಲಿ ವಿಧ, ವಿಧಾನದ ನೂರಾರು ಹಾವುಗಳ ಪ್ರದರ್ಶನ, ಹಾಗೂ ವಿಶೇಷ ಬಹುಮಾನಗಳು ಕೊಡುತ್ತಾರೆ, ಇದಲ್ಲವೇ ನಮ್ಮ ಸನಾತನ ಹಿಂದೂ ಧರ್ಮವಿಶೇಷ ಧಾರ್ಮಿಕ ಕಾರ್ಯಗಳು