ಕಣಬರಗಿ : ಬೆಳಗಾವಿ ಆರ್.ಪಿ.ಡಿ ವೃತ್ತದಲ್ಲಿ ವೀರಮದಕರಿ ನಾಯಕನ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಕಣಬರಗಿಯ ವಾಲ್ಮೀಕಿ ನೌಕರರ ಭವನದಲ್ಲಿ ಇಂದು ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಮೋಘಲರ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ಮಹಾನ್ ನಾಯಕ ವೀರಮದಕರಿ. ಅಂತಹ ದಿಮಂತ ನಾಯಕನ ಪ್ರತಿಮೆ ಸ್ಥಾಪನೆ ಮಾಡಬೇಕಾಗಿದೆ ಎಂದರು.
ಬೆಳಗಾವಿ ನಗರದಲ್ಲಿ ಈಗಾಗಲೇ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿ ಕರ್ನಾಟಕ ವಾಲ್ಮೀಕಿ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೇರಿ ಜಿಲ್ಲಾಧಿಕಾರಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಆದ ಕಾರಣ ಸರ್ಕಾರ, ಜಿಲ್ಲಾಡಳಿತ ಮಹಾನ್ ನಾಯಕ ವೀರ ಮದಕರಿ ಪ್ರತಿಮೆ ಸ್ಥಾಪನೆಗೊಳಿಸುವ ಮೂಲಕ ಅವರ, ಇತಿಹಾಸ ತಿಳಿಯುವಂತೆ ಮಾಡಬೇಕಾಗಿದೆ ಒತ್ತಾಯಿಸಿದರು.