ರಾತ್ರಿ ಹೊತ್ತಿನಲ್ಲಿ ತೋಟದಲ್ಲಿ ನಿಲ್ಲಿಸಲಾಗಿದ್ದ ಕುರಿಗಳ ಮೇಲೆ ತೋಳಗಳು ದಾಳಿ ಮಾಡಿದ್ದು ಈ ದಾಳಿಯಲ್ಲಿ ಸುಮಾರು 25 ಕುರಿಗಳು ದಾರುಣ ವಾಗಿ ಸಾವನ್ನೊಪ್ಪಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬೊಮ್ಮನಾಳ ಗ್ರಾಮದ ರಬಕವಿ ಅವರ ತೋಟದಲ್ಲಿ ನಿಲ್ಲಿಸಲಾಗಿದ್ದ ಮಲ್ಲಪ್ಪ ಹೀರೆಕೂಡಿ ಅವರಿಗೆ ಸೇರಿದ ಕುರಿಗಳು ಇವಾಗಿವೆ. ಅಲ್ಲದೆ ಕುರಿಗಳ ಮಾಲಿಕ ಮಲ್ಲಪ್ಪ ಅವರು ಊಟಕ್ಕೆ ಹೋದ ಸಮಯದಲ್ಲಿ ಈ ಘಟನೆ ನಡೆದಿದೆ.