ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಸಂದೇಶ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿಯ ಶ್ರೀ ವೀರಭದ್ರೇಶ್ವರ ಜಾತ್ರೆ ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಜಾತ್ರೆ ನಾವು ಬಾಲ್ಯದಲ್ಲಿ ಜಾತ್ರೆಯನ್ನು ನೋಡಿ ಆನಂದಪಟ್ಟ ಕ್ಷಣಗಳು ಇವತ್ತಿಗೂ ಕೂಡ ನೆನಪಿನಲ್ಲಿವೆ.
ರಾಮದುರ್ಗ ತಾಲೂಕಿನ ಎಂ ಚಂದರಗಿ ಗ್ರಾಮ ನಮ್ಮ ಹುಟ್ಟೂರು ಈ ಗ್ರಾಮದಿಂದ ಜಾತ್ರೆಗೆ ಬರುವಾಗ ಪಡುವ ಆನಂದ ಬಹುಶಃ ಅಷ್ಟಿಸ್ಟಲ್ಲ ಇವತ್ತು ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ನಾವೆಲ್ಲ ಬಂದು ಮಹಾಸ್ವಾಮಿಯ ದರ್ಶನವನ್ನು ಪಡಿತ್ತೇವೆ ಜಾತ್ರೆಗೆ ಬರುವ ಸದ್ಭಕ್ತರಿಗೆ ಈ ಸಂದರ್ಭದಲ್ಲಿ ಶ್ರೀಗಳು ಆರೋಗ್ಯದ ಕಡೆ ಗಮನಹರಿಸಿ ಜಾತ್ರೆಗೆ ಬಂದವರೆಲ್ಲರೂ ಕೂಡ ಧರ್ಮದ ಗಂಟನ್ನು ತೆಗೆದುಕೊಂಡು ಹೋಗಿ ಎಂದು ಶುಭ ಸಂದೇಶವನ್ನು ನೀಡಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪಕರಾದ ಕೆ ಬಿ ಗಾಟಿಕೆಯವರಿಗೆ ಶ್ರೀಗಳು ಸನ್ಮಾನಿಸಿ ಜಾತ್ರೆಯನ್ನು ಯಶಸ್ವಿ ಮಾಡಿ ಎಂದು ಆಶೀರ್ವದಿಸಿದರು.