ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದ ಜನಸಂಕಲ್ಪಯಾತ್ರೆಗೆ ಶಾಸಕ ದುರ್ಯೋಧನ ಐಹೊಳೆ ಜನರಿಗೆ ಸೀರೆ ಹಾಗೂ ಹಣವನ್ನು ನೀಡಿ ಜನರನ್ನು ಕರೆತಂದಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಗಂಗಾಧರ ದೇವರುಷಿ ಆರೋಪಿಸಿದರು…
ರಾಯಬಾಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಬಿಜೆಪಿ ಪಕ್ಷದ ಜನಸಂಕಲ್ಪ ಯಾತ್ರೆಯ ಯಶಸ್ವಿಯಾಗಿ ಶಾಸಕ ದುರ್ಯೊಧನ ಐಹೊಳೆಯವರು ಜನರಿಗೆ ಸೀರೆ,ಹಣವನ್ನು ನೀಡಿ ಜನರನ್ನು ಕರೆತಂದಿದ್ದಾರೆ.ಕೊರೊನಾ ಸಂಧರ್ಭದಲ್ಲಿ ಕ್ಷೇತ್ರದ ಎಲ್ಲ ಜನರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳಿದ್ದ ಶಾಸಕ ಐಹೊಳೆ ಈಗ ಜನಸಂಕಲ್ಪ ಯಾತ್ರೆ ಯಶಸ್ವಿಯಾಗಿ ಜನರಿಗೆ ಹಣ ಹಾಗೂ ಸೀರೆಯನ್ನು ನೀಡಿದ್ದಾರೆ.ಸದ್ಯದ ಪರಿಸ್ಥಿತಿ ಬದಲಾಗಿದೆ ಜನರು ಹಣಕ್ಕಾಗಿ ತಮ್ಮ ಮತವನ್ನು ಮಾರುವುದಿಲ್ಲ.ಈ ಬಾರಿ ಶಾಸಕ ಐಹೊಳೆಯವರಿಗೆ ಜನ ತಕ್ಕ ಪಾಠವನ್ನು ಕಲಿಸುತ್ತಾರೆ.15 ವರ್ಷಕಾಲ ಶಾಸಕರಾದರೂ ಕೂಡಾ ಯಾವುದೇ ಶಾಶ್ವತ ಯೋಜನೆಯನ್ನು ಜಾರಿಗೆ ತಂದಿಲ್ಲ.ರಾಯಬಾಗ ಕ್ಷೇತ್ರದ ಕೆಲವೊಂದು ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಇದೆ.ಅದಲ್ಲದೇ ಕ್ಷೇತ್ರದಲ್ಲಿ ಕೆಲವೊಂದು ಗಂಭೀರವಾದ ಸಮಸ್ಯೆಗಳು ಇವೆ.
ಈ ಬಗ್ಗೆ ಶಾಸಕರಿಗೆ ಗಮನವಿಲ್ಲ ಹಾಗೂ ರಾಯಬಾಗದಲ್ಲಿ ನಡೆದ ಜನಸಂಕಲ್ಪ ಯಾತ್ರೆಯನ್ನು ಭ್ರಷ್ಟಾಚಾರದಲ್ಲಿ ಕೂಡಿಟ್ಟ ಹಣದಿಂದ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಗಂಗಾಧರ ದೇವರುಷಿಯವರು ಹರಿಹಾಯ್ದರು..