ಖಾನಾಪೂರದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಸತೀಶ ಜಾರಕಿಹೊಳಿ ಅವರ ವಿರುದ್ಧ ಮಾಡಿದ ಪ್ರತಿಭಟನೆ ಖಂಡಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.
ದಿನಾಂಕ ೧೧ ರಂದು ಖಾನಾಪೂರ ತಾಲೂಕಿನ ಬಿಜೆಪಿ ಸಂಘ ಪರಿವಾರದವರು ಎಲ್ಲ ಹಿಂದೂ ಪರ ಸಂಘಟನೆಗಳು ಒಂದಾಗಿ ಖಾನಾಪೂರ ಪಟ್ಟಣದ ಶಿವಸ್ಮಾರಕದ ಎದುರು ಸತೀಶ್ ಅಣ್ಣಾ ಜಾರಕಿಹೊಳಿಯವರ ವಿರುದ್ಧ ಅವರ ಪ್ರತಿಕೃತಿಯನ್ನು ದಹಿಸಿ ಅವರ ಭಾವಚಿತ್ರಕ್ಕೆ ಅವಮಾನ ಮಾಡೋವ ಮೂಲಕ ಇಡೀ ದಲಿತ ಸಮಾಜಕ್ಕೆ ಧಕ್ಕೆ ತರುವಂತ ಕಾರ್ಯವನ್ನು ಮಾಡಿದ್ದಾರೆ ಇದನ್ನು ಖಂಡಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಪೋಲಿಸ್ ಠಾಣೆಯ ಮುಂದೆ ಧರಣಿ ನಡೆಸಲಾಯಿತು.
ಖಾನಾಪೂರ ಅಂಬೇಡ್ಕರ್ ಉದ್ಯಾನವನದಿಂದ ಖಾನಾಪೂರದ ಎಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಪ್ರಾರಂಭವಾಗಿ ಖಾನಾಪೂರ ಪೋಲಿಸ್ ಠಾಣೆಗೆ ತಲುಪಿ ಅಲ್ಲಿ ಖಾನಾಪೂರ ಪೋಲಿಸ್ ಇನ್ಸ್ಪೆಕ್ಟರ್ ಸುರೇಶ್ ಶಿಂಗಿ ಅವರಿಗೆ ಇದರ ಬಗ್ಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಖಾನಾಪೂರ ಪಟ್ಟಣ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷ ದಲಿತ ಮುಖಂಡ ಲಕ್ಷ್ಮಣ್ ಮಾದಾರ ಅವರು ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿಯವರು ನೀಡಿದ ಹೇಳಿಕೆ ಕುರಿತು ಉಲ್ಲೇಖಿಸಿ ಇದರ ಬಗ್ಗೆ ವಿವರಿಸಿದರು ಅನಂತರದಲ್ಲಿ ಇದರ ಬಗ್ಗೆ ಚರ್ಚೆಗೂ ಬನ್ನಿ ಅಂತ ಆಹ್ವಾನಿಸಿದರ್ರು ಅದರಂತೆಯೇ ಇದರ ಕುರಿತು ಬಹಿರಂಗವಾಗಿ ತಮ್ಮ ಹೇಳಿಕೆ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಇಷ್ಟೇಲ್ಲಾ ಆದ ಮೇಲೆ ನಿನ್ನೆ ಬಿಜೆಪಿ ಸಂಘ ಪರಿವಾರದವರು ಮಾಡಿದ್ದು ಖಂಡನೀಯ ಇದಕ್ಕಾಗಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂಪೂರ್ಣ ದಲಿತರ ಪರವಾಗಿ ಬೇಡಿಕೋಂಡರು.