Breaking News

ಗೋಕಾಕ: ಇಲ್ಲಿನಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ 2 ಲಕ್ಷ ಹಣ ದೋಚಿಕೊಂಡುಪರಾರಿ

Spread the love

ಗೋಕಾಕ: ಇಲ್ಲಿನ ಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ 2 ಲಕ್ಷ ಹಣ ದೋಚಿಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸ್ಪಂದನಾ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮದುರ್ಗ ಮೂಲದ ಪಕೀರಪ್ಪಾ ಕುರಿ, ಹಣದೊಂದಿಗೆ ಪರಾರಿಯಾದ ಆರೋಪಿ.
ಕೊಣ್ಣೂರಲ್ಲಿನ  ಇಪ್ಪತೈದು ಗ್ರಾಹಕರಿಂದ  ತಿಂಗಳಿಗೊಮ್ಮೆ ತುಂಬುವ ಹಣವನ್ನು ಎಗಿಸಿದ್ದಾನೆ.

ಫೈನಾನ್ಸ್ ನಿಂದ ಸಾಲ ಪಡೆದ ಗ್ರಾಹಕರು ಪ್ರತಿ ತಿಂಗಳು ಕಚೇರಿಗೆ ಬಂದು ಹಣ ಪಾವತಿಸುತ್ತಿದ್ದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯಾರು ಕಚೇರಿಯತ್ತ ಬರಬೇಡಿ.  ಹಣ ನನ್ನ ಬಳಿ ನೀಡುವಂತೆ ಮ್ಯಾನೇಜರ್ ಕಳುಹಿಸಿದ್ದಾರೆ ಅಂತಾ ನಂಬಿಸಿ  ಸುಮಾರು 2 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾನೆ.

ಇನ್ನೊಬ್ಬರ ಹೆಸರಿನ ಮೇಲೆ ಲೋನ ತೆಗೆದುಕೊಂಡಿದ್ದಲ್ಲದೆ ಹಲವಾರು ಜನರಿಗೆ ಹಣ ತುಂಬಲು ಪಿಡಿಸಿದ್ದಾನೆಂದು ಸ್ವತಃ ಸ್ಪಂದನಾ ಮೈಕ್ರೋ ಪೈನಾನ್ಸ್ ನ ಸಿಬ್ಬಂದಿಗಳ ಆರೋಪವಾಗಿದೆ.

ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ


Spread the love

About Laxminews 24x7

Check Also

ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ಹಲ್ಲೆ; ಬೆಳಗ್ಗೆಯೇ ದಾಳಿ ಪ್ಲಾನ್, 11 ಮಂದಿ ಅರೆಸ್ಟ್

Spread the loveಬೆಂಗಳೂರು: ಶಿವಾಜಿನಗರದಲ್ಲಿ  ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ GBA ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ