ಗೋಕಾಕ: ಇಲ್ಲಿನ ಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ 2 ಲಕ್ಷ ಹಣ ದೋಚಿಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸ್ಪಂದನಾ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮದುರ್ಗ ಮೂಲದ ಪಕೀರಪ್ಪಾ ಕುರಿ, ಹಣದೊಂದಿಗೆ ಪರಾರಿಯಾದ ಆರೋಪಿ.
ಕೊಣ್ಣೂರಲ್ಲಿನ ಇಪ್ಪತೈದು ಗ್ರಾಹಕರಿಂದ ತಿಂಗಳಿಗೊಮ್ಮೆ ತುಂಬುವ ಹಣವನ್ನು ಎಗಿಸಿದ್ದಾನೆ.
ಫೈನಾನ್ಸ್ ನಿಂದ ಸಾಲ ಪಡೆದ ಗ್ರಾಹಕರು ಪ್ರತಿ ತಿಂಗಳು ಕಚೇರಿಗೆ ಬಂದು ಹಣ ಪಾವತಿಸುತ್ತಿದ್ದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯಾರು ಕಚೇರಿಯತ್ತ ಬರಬೇಡಿ. ಹಣ ನನ್ನ ಬಳಿ ನೀಡುವಂತೆ ಮ್ಯಾನೇಜರ್ ಕಳುಹಿಸಿದ್ದಾರೆ ಅಂತಾ ನಂಬಿಸಿ ಸುಮಾರು 2 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾನೆ.
ಇನ್ನೊಬ್ಬರ ಹೆಸರಿನ ಮೇಲೆ ಲೋನ ತೆಗೆದುಕೊಂಡಿದ್ದಲ್ಲದೆ ಹಲವಾರು ಜನರಿಗೆ ಹಣ ತುಂಬಲು ಪಿಡಿಸಿದ್ದಾನೆಂದು ಸ್ವತಃ ಸ್ಪಂದನಾ ಮೈಕ್ರೋ ಪೈನಾನ್ಸ್ ನ ಸಿಬ್ಬಂದಿಗಳ ಆರೋಪವಾಗಿದೆ.
ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ