ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಕೋಟಿ ಕಂಠ ಗಾಯನ-೨೦೨೨ರನ್ನು ಹಮ್ಮಿಕೊಳ್ಳಲಾಗಿತ್ತು.
ಶುಕ್ರವಾರದಂದು ಬೆಳಗಾವಿಯ ಜೆಎನ್ಎಂಸಿ ಕ್ಯಾಂಪಸ್ನ ಉದ್ಯಾನದಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಕೋಟಿ ಕಂಠ ಗಾಯನ-೨೦೨೨ರನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮುಖ್ಯ ಅತಿಥಿಗಳಾಗಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಡಾ. ಕೋಠಿವಾಲೆ, ಡಾ. ವಿಡಿ ಪಾಟೀಲ, ಡಾ. ಮಹಾಂತಶೆಟ್ಟಿ, ಡಾ. ಎಂ.ವಿ. ಜಾಲಿ ಮತ್ತು ಡಾ.ಎಚ್ ಬಿ ರಾಜಶೇಖರ್ ಉಪಸ್ಥಿತರಿದ್ಧರು.
ಈ ವೇಳೆ ಕೋಟಿ ಕಂಠಗಳಲ್ಲಿ ಹಚ್ಚೇವು ಕನ್ನಡದ ದೀಪ…ಬಾರಿಸು ಕನ್ನಡ ಡಿಂಡಿಮವಾ…ಜಯ ಹೇ ಕರ್ನಾಟಕ ಮಾತೆ… ಈ ಎಲ್ಲ ನಾಡಗೀತೆಗಳು ಕನ್ನಡದ ಕಂಪನ್ನು ಹರಡಿದವು. ಕೋಟಿ ಕಂಠ ಗಾಯನ-೨೦೨೨ರಲ್ಲಿ ಸುಮಾರು ೨೦೦ ವಿದ್ಯಾರ್ಥಿಗಳು ಭಾಗಿಯಾಗಿದ್ಧರು.