ರಾಜ್ಯದಲ್ಲಿ ಮಕ್ಕಳ ಕಳ್ಳರ ಹಾವಳಿ ಇದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರದಾಡುತ್ತಿರುವಾಗಲೇ ವಿಜಯಪುರ ನಗರದಲ್ಲಿ ಅಪ್ರಾಪ್ತ ಬಾಲಕನ ಕಿಡ್ಯಾಪ್ ಆಥವಾ ಕಳ್ಳತನ ಯತ್ನಿಸಿರುವ ಘಟನೆ ನಡೆದಿದೆ.
ಅಂಗಡಿಗೆ ಪೆನ್ ತರಲು ಹೋಗಿದ್ದ ವೇಳೆ ಅಪ್ರಾಪ್ತ ಬಾಲಕನನ್ನು ಬೈಕ್ ನಲ್ಲಿ ಇಬ್ಬರು ಯಾರೋ ಅಪರಿಚಿತರು ಎತ್ತೊಯ್ಯಿದ್ದಿದ್ದಾರೆ.
ಭಾಸ್ಕರ್ ಶಿರನಾಳ (11) ಅಪಹರಣ ಅಥವಾ ಕಳ್ಳತನ ಮಾಡಲು ಯತ್ನಕ್ಕೋಳಗಾದ ಬಾಲಕನಾಗಿದ್ದು ಈ ಬಾಲಕನನ್ನು ಬೈಕ್ ನಲ್ಲಿ ಕರೆದೊಯ್ಯುವ ವೇಳೆ ಅವರಿಚಿತ ವ್ಯಕ್ತಿಗಳಿಂದ ತಪ್ಪಿಸಿ ಕೊಂಡು ಬಂದಿರೋ ಬಾಲಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾನೆ. ಸದ್ಯ ಮನೆಯಲ್ಲಿರೋ ಬಾಲಕನ ಮನೆಗೆ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಪಿಐ ಸಿದ್ದೇಶ ಹಾಗೂ ಇತರೆ ಸಿಬ್ಬಂದಿ ಭೇಟಿ ನೀಡಿದ್ದಾರೆ.ಸ್ಥಳಿಯ ಸಿಸಿ ಕೆಮೆರಾ ಪರಿಶೀಲನೆ ಮಾಡುತ್ತಿರೋ ಪೊಲೀಸರು ಬಾಲಕನ ಕಿಡ್ಯಾಪ್ ಅಥವಾ ಕಳ್ಳತನ ಘಟನೆ ಕುರಿತ ತನಿಖೆ ನಡೆಸುತ್ತಿದ್ದಾರೆ. ಬಾಲಕನ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದ್ದು ಇತ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ