ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಆಗಮಿಸುವವರಿಗಾಗಿ ಅನುಕೂಲವಾಗಲು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಾಥಮಿಕ ಕೆಲಸಗಳು ಶುರುವಾಗಿವೆ.
ಚೆರುವಲ್ಲಿ ಎಸ್ಟೇಟ್ನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮಣ್ಣಿನ ಪರೀಕ್ಷೆ ಸೋಮವಾರ ಆರಂಭವಾಗಲಿದೆ.
ಈ ಮೂಲಕ ತಜ್ಞರ ತಂಡ, ರನ್ವೇ ನಿಲ್ದಾಣಕ್ಕೆ ಅಲ್ಲಿನ ಮಣ್ಣಿನ ಸ್ಥಿತಿ ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಲಿದೆ.
ಕನ್ಸಲ್ಟಿಂಗ್ ಸಂಸ್ಥೆ ಲೂಯಿಸ್ ಬರ್ಗರ್ ಪರವಾಗಿ ಜಿಯೋ ಐಡಿ ಏಜೆನ್ಸಿಯ ಅಧಿಕಾರಿಗಳು ಮಣ್ಣಿನ ಪರೀಕ್ಷೆ ನಡೆಸಲು ನವದೆಹಲಿಯಿಂದ ಶಬರಿಮಲೆಗೆ ಆಗಮಿಸಿದ್ದಾರೆ.