Breaking News

ಬೆಳಗಾವಿಯ ಶ್ರೀನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ರವಿವಾರ ವಿದ್ಯುತ್ ಸ್ಥಗಿತ

Spread the love

33 ಕೆವ್ಹಿ ಎಸ್&ಎಲ್ ವಿಭಾಗ, ಹುವಿಸಕಂನಿ, ಬೆಳಗಾವಿ ಇವರ ವಿನಂತಿ ಮೇರೆಗೆ 33/11ಕೆವ್ಹಿ ಜಿ.ಆಯ್.ಎಸ್.ಶ್ರಿನಗರ ಉಪ ಕೇಂದ್ರ ಬೆಳಗಾವಿಯಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಈ ಕೆಳಗೆ ತಿಳಿಸಿದ ಬೆಳಗಾವಿ ನಗರ ಪ್ರದೇಶಗಳಲ್ಲಿ ರವಿವಾರ ದಿನಾಂಕ: 28.08.2022ರಂದು ಮುಂಜಾನೆ 10:00ಗಂಟೆಯಿಂದ ಸಾಯಂಕಾಲ 05:00 ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಶ್ರೀನಗರದ ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ. ಆಂಜನೇಯ ನಗರ ಏರಿಯಾ. ಮಹಾಂತೇಶ ನಗರ ಸೆಕ್ಟರ ನಂ 8,9,10,11,ಮತ್ತು 12, ರುಕ್ಮಿನಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ರಾಮತೀರ್ಥ ನಗರ, ಕಣಬರ್ಗಿರೋಡ ಸೈಟ್‍ಏರಿಯಾ, ಕೆಎಮ್‍ಎಫ್‍ಡೈರಿಏರಿಯಾ. ಶಿವಾಜಿ ನಗರ, ಶಿವಬಸವ ನಗರ ಭಾಗಶಃ, ಎಸ ಬಿ ಆಯ್ ಯಿಂದಧರ್ಮನಾಥ ಭವನ, ಅಶೋಕ ನಗರ,ಕಾನ್ಸರ ಹಾಸ್ಪಿಟಲ್, ಹಾಗೂ ಇಎಸ ಆಯ ಹಾಸ್ಪಿಟಲ್, ವೀರಭಧ್ರ ನಗರ, ಶಿವಾಜಿ ನಗರ, ಪೋಲೀಸ ಹೆಡಕ್ವಾಟರ್ಸ, ಕೆಎಸ ಆರಟಿಸಿ ಕ್ವಾಟರ್ಸ, ತ್ರಿವೇಣಿ ಹೋಟೆಲ್‍ಎರಿಯಾ, ಮೆಟಗೂಡ ಹಾಸ್ಪಿಟಲ್.

ಚನ್ನಮ್ಮ ಸರ್ಕಲ್, ಕಾಲೇಜುರೋಡಕಾಕತಿ ವೇಜ್, ಕ್ಲಬ್‍ರಸ್ತೆ, ಡಿ.ಸಿ ಆಫೀಸ್, ಕೋರ್ಟ್ ಕಂಪೌಂಡ. ಐ.ಸಿ.ಎಮ್.ಆರ್ ಕಛೇರಿ ಪ್ರದೇಶದಲ್ಲಿ ರವಿವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರ್ ಅವರು ಮನವಿ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ