ಬೆಳಗಾವಿಯ ಜಾಧವ ನಗರದಲ್ಲಿ ಚಿರತೆ ದಾಳಿ ಹಿನ್ನೆಲೆ ಆರ್ಎಫ್ಒ ರಾಕೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಜರ ಹಾಗೂ ಟ್ರ್ಯಾಂಕುಲೇಶನ್ ಗನ್ ಜೊತೆಗೆ ತಜ್ಞರಿಗೆ ಬರಲು ಹೇಳಲಾಗಿದ್ದು ಚಿರತೆಯನ್ನು ಸೆರೆಹಿಡಿಯುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಎಫ್ಒ ರಾಕೇಶ್ರವರು, ಈ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿದ್ದನ್ನು ನೋಡಿದರೆ ಅದು ಚಿರತೆ ಅಲ್ಲ ಎನಿಸುತ್ತದೆ.
ಲಿಯೋಪರ್ಡ್ ಹಾಗೂ ಲಿಯೋಪರ್ಡ್ ಕ್ಯಾಟ್ ಸೈಜ್ ಒಂದೇ ಆದರೂ ಕೂಡ ವ್ಯತ್ಯಾಸವಿದೆ. ಆದರೆ ಸಿಸಿಟಿವಿ ನೋಡಿದರೆ ಸೈಜ್ ಸ್ವಲ್ಪ ದೊಡ್ಡದಿದೆ. ಜನರು ಲಿಯೋಪರ್ಡ್ ಕ್ಯಾಟ್ ಇದ್ದರೂ ಕೂಡ ಚಿತರೆ ಎಂದು ಗಾಬರಿಯಾಗುತ್ತಾರೆ.
ಕೇಜ್ ಹಾಗೂ ಟ್ರ್ಯಾಂಕುಲೇಶನ್ ಗನ್ ತಂದ ಮೇಲೆ ಚಿರತೆ ಹಿಡಿಯುವ ಕಾರ್ಯವನ್ನು ಮಾಡಲಾಗುತ್ತದೆ. ಅದು ನಮಗೆ ಕಂಡ ತಕ್ಷಣ ಡಾಟ್ ಮಾಡುತ್ತೇವೆ.