Home / Uncategorized / ಚೀಲ ಹರಿದು ರಸ್ತೆ ಪಾಲಾಗುತ್ತಿದ್ದ ಅಕ್ಕಿ ತಡೆದ ಸಂತೋಷ ಧರೇಕರ್

ಚೀಲ ಹರಿದು ರಸ್ತೆ ಪಾಲಾಗುತ್ತಿದ್ದ ಅಕ್ಕಿ ತಡೆದ ಸಂತೋಷ ಧರೇಕರ್

Spread the love

ಬೆಳಗಾವಿ ತಾಲೂಕಿನ ದೇಸೂರು ರೈಲು ನಿಲ್ದಾಣದಿಂದ ಗಣೇಶಪುರದ ಗೋಡೌನ್ ಕಡೆಗೆ ಅಕ್ಕಿಯನ್ನು ತುಂಬಿಕೊಂಡು ಒಂದು ಲಾರಿ ಹೋಗುತ್ತಿತ್ತು. ಈ ವೇಳೆ ಚೀಲ ಕಟ್ ಆಗಿ ದಾರಿಯುದ್ದಕ್ಕೂ ಅಕ್ಕಿ ಬೀಳುತ್ತಾ ಹೋಗುತ್ತಿತ್ತು. ಇದನ್ನು ಗಮನಿಸಿದ ಸಮಾಜಸೇವಕ ಸಂತೋಷ ಧರೇಕರ್ ವ್ಯರ್ಥವಾಗುತ್ತಿದ್ದ ಅಕ್ಕಿಯನ್ನು ತಡೆದಿದ್ದಾರೆ.

ಹೌದು ಒಂದು ಅಗಳಿನ ಅನ್ನದ ಬೆಲೆ ಅದನ್ನು ಕಷ್ಟಪಟ್ಟು ಬೆಳೆದ ರೈತನಿಗೆ ಗೊತ್ತು. ಆದರೆ ಈ ರೀತಿ ಅಕ್ಕಿಯು ದಾರಿಯುದ್ದಕ್ಕೂ ಬೀಳುತ್ತಿರುವುದನ್ನು ಗಮನಿಸಿದ ಸಂತೋಷ ಧರೇಕರ್ ಈ ಲಾರಿಯನ್ನು ಟಿಳಕವಾಡಿಯ 3ನೇ ರೈಲ್ವೇ ಗೇಟ್‍ನಿಂದ ಹಿಂಬಾಲಿಸಿ ಟ್ರಕ್‍ನ್ನು ನಿಲ್ಲಿಸಿ ಚೀಲ ಹರಿದು ಅಕ್ಕಿ ವ್ಯರ್ಥವಾಗುತ್ತಿರುವುದನ್ನು ತಿಳಿಸಿದೆ.

ನಂತರ ಚೀಲಕ್ಕೆ ತುಂಡಾ ಬಟ್ಟೆಯನ್ನು ಹಾಕಿ ಅಕ್ಕಿ ಬೀಳದಂತೆ ಲಾರಿ ಚಾಲಕನಿಗೆ ತಿಳಿಸಲಾಯಿತು. ಈ ವೇಳೆ ಟಿಳಕವಾಡಿ ಪೊಲೀಸರು ಕೂಡ ಆಗಮಿಸಿದ್ದರು. 480 ಚೀಲ ಅಕ್ಕಿಯನ್ನು ತುಂಬಿಕೊಂಡು ಈ ಲಾರಿ ಹೋಗುತ್ತಿತ್ತು


Spread the love

About Laxminews 24x7

Check Also

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

Spread the love ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ