ಬೆಳಗಾವಿ ತಾಲೂಕಿನ ದೇಸೂರು ರೈಲು ನಿಲ್ದಾಣದಿಂದ ಗಣೇಶಪುರದ ಗೋಡೌನ್ ಕಡೆಗೆ ಅಕ್ಕಿಯನ್ನು ತುಂಬಿಕೊಂಡು ಒಂದು ಲಾರಿ ಹೋಗುತ್ತಿತ್ತು. ಈ ವೇಳೆ ಚೀಲ ಕಟ್ ಆಗಿ ದಾರಿಯುದ್ದಕ್ಕೂ ಅಕ್ಕಿ ಬೀಳುತ್ತಾ ಹೋಗುತ್ತಿತ್ತು. ಇದನ್ನು ಗಮನಿಸಿದ ಸಮಾಜಸೇವಕ ಸಂತೋಷ ಧರೇಕರ್ ವ್ಯರ್ಥವಾಗುತ್ತಿದ್ದ ಅಕ್ಕಿಯನ್ನು ತಡೆದಿದ್ದಾರೆ.
ಹೌದು ಒಂದು ಅಗಳಿನ ಅನ್ನದ ಬೆಲೆ ಅದನ್ನು ಕಷ್ಟಪಟ್ಟು ಬೆಳೆದ ರೈತನಿಗೆ ಗೊತ್ತು. ಆದರೆ ಈ ರೀತಿ ಅಕ್ಕಿಯು ದಾರಿಯುದ್ದಕ್ಕೂ ಬೀಳುತ್ತಿರುವುದನ್ನು ಗಮನಿಸಿದ ಸಂತೋಷ ಧರೇಕರ್ ಈ ಲಾರಿಯನ್ನು ಟಿಳಕವಾಡಿಯ 3ನೇ ರೈಲ್ವೇ ಗೇಟ್ನಿಂದ ಹಿಂಬಾಲಿಸಿ ಟ್ರಕ್ನ್ನು ನಿಲ್ಲಿಸಿ ಚೀಲ ಹರಿದು ಅಕ್ಕಿ ವ್ಯರ್ಥವಾಗುತ್ತಿರುವುದನ್ನು ತಿಳಿಸಿದೆ.
ನಂತರ ಚೀಲಕ್ಕೆ ತುಂಡಾ ಬಟ್ಟೆಯನ್ನು ಹಾಕಿ ಅಕ್ಕಿ ಬೀಳದಂತೆ ಲಾರಿ ಚಾಲಕನಿಗೆ ತಿಳಿಸಲಾಯಿತು. ಈ ವೇಳೆ ಟಿಳಕವಾಡಿ ಪೊಲೀಸರು ಕೂಡ ಆಗಮಿಸಿದ್ದರು. 480 ಚೀಲ ಅಕ್ಕಿಯನ್ನು ತುಂಬಿಕೊಂಡು ಈ ಲಾರಿ ಹೋಗುತ್ತಿತ್ತು