ಬೆಳಗಾವಿಯ ಶಿವಸೇನಾ ವತಿಯಿಂದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಜನುಮ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗಾವಿಯ ಟಿಳಕ ಚೌಕ್ನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹುಟ್ಟು ಹಬ್ಬವನ್ನು ಸ್ಥಳೀಯ ಹಿರಿಯ ನಾಗರಿಕ ಮಹಾದೇವ ಅವರ ಕೈಯಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಬಳಿಕ ನೆರೆದಿದ್ದ ಸಾರ್ವಜನಿಕರಿಗೆ ಸಿಹಿಯನ್ನು ಹಂಚಿ, ಉದ್ಧವ್ ಠಾಕ್ರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ವೇಳೆ ಬೆಳಗಾವಿಯ ಶಿವಸೇನಾ ಮುಖಂಡ ಬಂಡು ಕೇರವಾಡ್ಕರ್ ಮಾತನಾಡಿ ಬೆಳಗಾವಿಯ ಜನ ನಾವು ಬಹಳ ಹಿಂದಿನಿಂದಲೂ ಬಾಳಾಸಾಹೇಬ ಠಾಕ್ರೆ ಕುಟುಂಬದ ಜೊತೆ ನಿಂತಿದ್ದೇವೆ. ಮುಂದೆಯೂ ನಾವು ಅವರ ಜೊತೆಯೇ ಇರುತ್ತೇವೆ. ಉದ್ಧವ್ ಅವರ ಹುಟ್ಟು ಹಬ್ಬವನ್ನು ಅತ್ಯಂತ ಸಂತಸದಿಂದ ಆಚರಿಸುತ್ತಿದ್ದೇವೆ. ಮುಂದೆಯೂ ಇದೇ ರೀತಿ ಸಾಮಾಜಿಕ ಕೆಲಸ ಮಾಡುತ್ತೇವೆ ಎಂದರು.