ಬೆಳಗಾವಿ: ‘ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಅಮೆರಿಕಕ್ಕೆ ಹೋಗುವುದಾಗಿ ನನಗೆ ಮುಂಚೆಯೇ ಹೇಳಿದ್ದರು. ಆರು ತಿಂಗಳ ಹಿಂದೆಯೇ ಅವರ ಕಾರ್ಯಕ್ರಮ ನಿಗದಿಯಾಗಿದ್ದರಿಂದ, ವಿಧಾನ ಪರಿಷತ್ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲು ಅವರಿಗೆ ಆಗಿಲ್ಲ.
ಆದರೆ, ನಮ್ಮ ಅಭ್ಯರ್ಥಿಗಳು ಗೆಲ್ಲಲು ಏನು ಬೇಕೋ ಅದನ್ನು ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘ಕೋರೆ ಅವರು ನಮ್ಮ ಹಿರಿಯರು, ಮಾರ್ಗದರ್ಶಕ. ಅವರ ಕೊಡುಗೆಯನ್ನು ಪಕ್ಷವೂ ಗುರುತಿಸುತ್ತದೆ, ನಾವೂ ಗುರುತಿಸುತ್ತೇವೆ. ಸುದೀರ್ಘ ನಾಲ್ಕು ದಶಕಗಳ ಅವರ ಸಾರ್ವಜನಿಕ ಸೇವೆಯು ನಮಗೆ ಮಾರ್ಗದರ್ಶಿ. ಅವರಿಗೆ ಪಕ್ಷದಲ್ಲಿ ಮಹತ್ವ ನೀಡಿಲ್ಲ ಎಂಬುದು ಬರೀ ಊಹಾಪೋಹ’ ಎಂದು ಅವರು ನಗರದಲ್ಲಿ ಮಧ್ಯಮದವರಿಗೆ ತಿಳಿಸಿದರು.
‘