ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೆ ಬಿಜೆಪಿ ಸೇರಲು ಹೋಗಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಸೇರಲು ಅಡ್ವಾಣಿ ಬಳಿ ಹೋಗಿದ್ದರು.
ಒಂದು ಕಾಲದಲ್ಲಿ ಅಡ್ವಾಣಿ ಬಳಿ ಟವೆಲ್ ಹಾಕಿದ್ದರು. ಬೇಕಿದ್ದರೆ ಸಿದ್ದರಾಮಯ್ಯ ಜೊತೆ ಹೋಗಿದ್ದವರನ್ನು ಕೇಳಿ ಎಂದು ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆ ಪ್ರಯತ್ನದ ಬಗ್ಗೆ ಲೇವಡಿ ಮಾಡಿದ್ದಾರೆ.
ಇನ್ನು ಸಿದ್ದರಾಮಯ್ಯ ಈಗ ಮನ್ಸೂರ್ ಬೆಂಬಲಿಸುವಂತೆ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದಾರೆ. ಜೈರಾಂ, ರಮೇಶ್ ಬದಲು ಅಲ್ಪಸಂಖ್ಯಾತರಿಗೆ ಇವರು ಟಿಕೆಟ್ ಕೊಡಬಹುದಿತ್ತು. ಮೊದಲ ಅಭ್ಯರ್ಥಿ ಹಾಕಬಹುದಿತ್ತು. ಯಾಕೆ ಆಗ ಹಾಕಲಿಲ್ಲ. ಇನ್ನು ಈ ಹಿಂದೆ ದೇವೇಗೌಡರು ರಾಜ್ಯಸಭೆಗೆ ಹೋಗಿದ್ದಕ್ಕೆ ರಾಜ್ಯದ ನೆಲ,ಜಲ ಭಾಷೆ ವಿಚಾರದಲ್ಲಿ ನ್ಯಾಯ ಸಿಕ್ಕಿದೆ ಎಂದರು.