ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಖಾನಾಪುರ ತಾಲೂಕಿನ ಎಂಇಎಸ್ ಯುವ ಘಟಕದ ಸದಸ್ಯರು ಖಾನಾಪುರ ತಹಶೀಲ್ದಾರ್, ಸಮೂಹ ಶಿಕ್ಷಣಾಧಿಕಾರಿಗಳು, ಹಾಗೂ ಕೆಎಸ್ಆರ್ಟಿಸಿ ಡಿಪೊ ಮ್ಯಾನೇಜರ್ರವರಿಗೆ ಮನವಿ ಮಾಡಿದರು.
ಕಳೆದ ಎರಡು ವರ್ಷಗಳಿಂದ ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕೂಡ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಣದುಬ್ಬರ ದರ ತಗ್ಗಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ್ದು ಸ್ವಲ್ಪ ಸಮಾಧಾನಕರ. ಆದರೆ ರಾಜ್ಯ ಸರಕಾರವೂ ದರ ಇಳಿಕೆಗೂ ಪ್ರಯತ್ನಿಸಬೇಕು ಎಂದು ತಹಸೀಲ್ದಾರ್ರಿಗೆ ಮನವಿ ಮಾಡಿದರು.
ಕೆಲ ದಿನಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ನಡೆದಿದ್ದು, ಖಾನಾಪುರ ತಾಲೂಕಿನಲ್ಲಿ ಮರಾಠಿ ಮಾಧ್ಯಮ ಶಿಕ್ಷಕರ ನೇಮಕಾತಿಯಲ್ಲಿ ಅನ್ಯಾಯವಾಗಿದ್ದು, ಮರಾಠಿ ಮಾಧ್ಯಮಕ್ಕೆ ಕಡಿಮೆ ಜಾಗ ನೀಡಿರುವುದರಿಂದ ಮರಾಠಿಯ ಶೈಕ್ಷಣಿಕ ನಷ್ಟವಾಗಲಿದೆ ಎಂದರು.
8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಹಳೆ ಬಸ್ಗಳನ್ನು ಬಿಡಲಾಗುತ್ತಿದ್ದು, ಅದೇ ರೀತಿ 7ನೇ ತರಗತಿ ತೇರ್ಗಡೆಯಾದ ಹಾಗೂ 8ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ತಾಲೂಕಿಗೆ ಹೆಚ್ಚು ಬಸ್ಗಳನ್ನು ಬಿಡಬೇಕು ಎಂದು ಖಾನಾಪುರ ಯುವ ಸಮಿತಿಯ ವತಿಯಿಂದ ಡಿಪೋ ಹೆಡ್ ಮಹೇಶ ತಿರಕನವರ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.