ಜಮೀನಿನ ಮಾಲೀಕರಿಗೆ ಮಾಹಿತಿ ನೀಡದೆ ಜಲ ಕುಂಭ ನಿರ್ಮಾಣ ಜೇ ಜಿ ಎಮ್ ಪ್ಲಾನ್ ನಲ್ಲಿ ರೈತರಿಗೆ ವಂಚಿಸಿದ ಗುತ್ತಿಗೆದಾರ …..
ಶೈಕ್ಷಣಿಕ ಜಿಲ್ಲಾ ಚಿಕ್ಕೋಡಿ ವ್ಯಾಪ್ತಿಯಲ್ಲಿ ಬರುವ ನಾಗರಮುನ್ನೋಳಿ ಗ್ರಾಮದಲ್ಲಿ ಜಲಜೀವನ್ ಮಷೀನ್ ಯೋಜನೆಯ ಅಡಿ ಕಾಮಗಾರಿಯು ಮೊದಲಿನಿಂದಲೂ ಕಳಪೆಯಾಗಿ ನಡೆಯುತ್ತಿದು ಅದರಲ್ಲಿ ಇವಾಗ ಮಾಲ್ಕಿನ್ ಜಾಗದಲ್ಲಿ ದಬ್ಬಾಳಿಕ್ಕೆ ಮೇರೆದು ಗುತ್ತಿಗೆದಾರ ದುರರ್ವತ್ತಣೆ ಮೆರೆದಿದ್ದಾನೆ ,
ರೈತರಿಗೆ ಮಾಹಿತಿ ನೀಡದೆ ಅವರ ಹೊಲದಲ್ಲಿ ಜಲಕುಂಭ ನಿರ್ಮಾಣ ಮಾಡಿ ಇವಾಗ ರಾಜಕಿಯ ತಂದೋಡ್ಡಿ ರೈತರಿಗೆ ಜೀವ ಬೆದರಿಕ್ಕೆ ಹಾಕಿ ಹಣ ಹೊಡೆಯವ ಪ್ರಯತ್ನ ಮಾಡುತ್ತಿದ್ದಾನೆ,
ನಾಗರಮುನ್ನೊಳಿ ಗ್ರಾಮದಲ್ಲಿ ಯಾವುದೇ ರೀತಿಯ ಕಾಮಗಾರಿಗಳು ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ ಇದರಲ್ಲಿ ಎಲ್ಲ ಅಧಿಕಾರಿಗಳು ಕೈಜೋಡಿಸಿ ಕಣ್ಮುಚ್ಚಿ ಕುಳಿತಿದ್ದಾರೆ ಕಾರಣ ಕೈ ಬೆಚ್ಚಿಗಿನ ಕರಾಮತ್ತು ಅಂತಾ ಹೇಳಬಹುದು,
ಸರ್ವೆ ನಂಬರ್117/1 ಅ ಈ ಜಮೀನು 7 ಜನರಿಗೆ ಜಂಟಿಯಾಗಿ ಇರುತ್ತದೆ ಅವರ ಅನುಮತಿ ಪಡೆಯದೆ ಇಲ್ಲಿ ಅನಧಿಕೃತವಾಗಿ ಜಲಕುಂಭ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಈ ಜಮೀನನ್ನು ಇನ್ನೂ ಯಾರು ಹಂಚಿಕೊಂಡಿಲ್ಲ ಈ ವಿಷಯವಾಗಿ ಗ್ರಾಮ ಪಂಚಾಯತಿ ನಾಗರಮುನ್ನೋಳಿ ಹಾಗೂ ತಾಲೂಕು ಪಂಚಾಯತ ಚಿಕ್ಕೋಡಿ ಅಧಿಕಾರಿಗಳಿಗೆ ದಿನಾಂಕ 20/12 /2021 ರಂದು ಅರ್ಜಿ ಸಲ್ಲಿಸಿದರು ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೂಂಡಿಲ್ಲ,
ಇದರ ಕುರಿತು ಕೇಳಲು ಹೋದ ಯುವಕನ ಮೇಲೆ ಪೊಲೀಸ್ ಠಾಣೆಗೆ ಕರೆಸಿ ರಾಜು ಯಾದಗೂಡ ಎಂಬಾತ ಯುವಕನನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಹೆದರಿಕೆ ಹಾಕಿದ್ದಾನೆ ಎಂದು ನೊಂದ ರೈತ ಮಾದ್ಯಮ ಮುಂದೆ ತಮ್ಮ ಅಳಲು ತೊಡಿಕೊಂಡಿದ್ದಾನೆ,
ಇನ್ನಾದರೂ ಎಚ್ಚತುಕೊಂಡು ನಾಗರಮುನ್ನೋಳಿ ಪಂಚಾಯತ ಭ್ರಷ್ಟ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಹಾಗೂ ಇಲ್ಲಾಡಳಿತ ಮತ್ತು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ನೂಂದ ರೈತನಿಗೆ ನ್ಯಾಯ ದೂರಕಿಸಿಕೊಡಬೇಕು ಜೊತೆಗೆ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮಕೈಗುಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ರೈತರು ಒತ್ತಾಯಿಸಿದರು,
ಒಂದು ವೇಳೆ ತಕ್ಷಣವೇ ಕ್ರಮ ಕೈಗೊಳ್ಳದೆ ಹೋದಲ್ಲಿ ಕೋರ್ಟ್ ಮೂರೆಹೋಗಿ ನ್ಯಾಯ ದೂರಕಿಸಿಕೊಳ್ಳುವ ಪ್ರಯತ್ನ ಸಹ ಮಾಡುವುದಾಗಿ ರೈತ ಪರ ಹೋರಾಟಗಾರರು ತಿಳಿಸಿದರು,