ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಪ್ರಯುಕ್ತÀವಾಗಿ ಎಚ್ಇಆರ್ಎಫ್ ರಕ್ಷಣಾ ತಂಡ ಬೆಳಗಾವಿ ವತಿಯಿಂದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತಂತೆ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಪ್ರಯುಕ್ತÀವಾಗಿ ಕೊನೆಯ ದಿನ ಎಚ್ಇಆರ್ಎಫ್ ರಕ್ಷಣಾ ತಂಡ ಬೆಳಗಾವಿ ವತಿಯಿಂದ ಮಕ್ಕಳಿಗೆ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಕ್ಷಣಾ ತಂತ್ರಗಳನ್ನು ಕುರಿತಂತೆ ಎಚ್ಇಆರ್ಎಫ್ ರಕ್ಷಣಾ ತಂಡ ಸಿಬ್ಬಂದಿ ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಈ ವೇಳೆ ಮಕ್ಕಳಿಗೆ ನದಿಯಲ್ಲಿ ಮುಳುಗಿದ ವ್ಯಕ್ತಿಗಳ ರಕ್ಷಣೆ, ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ರಕ್ಷಣೆ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಜೀವ ರಕ್ಷಣೆ, ಹಾವು ಕಡಿತ, ಹಾರ್ಟ್ ಅಟ್ಯಾಕ್ ಆದ ಸಂದರ್ಭಗಳಲ್ಲಿ ಮೊದಲು ಜೀವ ಉಳಿಸುವುದು ಹೇಗೆ, ಕೊರೊನಾ ಸಂದರ್ಭದಲ್ಲಿ ಆಕ್ಷಿಜನ್ ಸಹಾಯದಿಂದ ರಕ್ಷಣೆ, ಹಗ್ಗದ ಸಹಾಯದಿಂದ ಮರ ಏರುವುದು ಹಾಗೂ ಇಳಿಯುವುದು ಸೇರಿದಂತೆ ವಿವಿಧ ಟಾಪಿಕ್ಗಳನ್ನು ಕುರಿತಂತೆ ಮಕ್ಕಳಿಗೆ ತಿಳಿಸಲಾಯಿತು.