ಶಿರಹಟ್ಟಿ(ಗದಗ): ಲಕ್ಷಾಂತರ ಜನರ ಹರ್ಷೋದ್ಘಾರ, ಭಕ್ತರ ಜಯಘೋಷಗಳ ಮಧ್ಯ ನಾಡಿನ ಹಿಂದು-ಮುಸ್ಲಿಂ ಭಾವೈಕತೆಯ ಕೇಂದ್ರ ಶಿರಹಟ್ಟಿ ಆರಾಧ್ಯ ದೈವ ಫಕೀರೇಶ್ವರ ಮಹಾರಥೋತ್ಸವ ಸೋಮವಾರ ಅಪಾರ ಭಕ್ತ ಸಮೂಹದ ನಡುವೆ ಸಂಭ್ರಮ, ಸಡಗರದೊಂದಿಗೆ ನಡೆಯಿತು.
`ಫಕೀರೇಶ್ವರ ಮಹರಾಜ ಕಿ ಜೈ, ಧಿನ್ ಫಕೀರೇಶ” ಎಂಬ ಜಯಘೋಷ ಮೊಳಗಿತು. ಬೆಳಗ್ಗೆ ಕರ್ತೃ ಗದ್ದುಗೆಗೆ ಕ್ಷೀರಾಭಿಷೇಕದೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಂಡಿತು. ಸೋಮವಾರ ಬೆಳಗ್ಗೆ ಪುರ ಪ್ರವೇಶ ಮಾಡಿದ ಫಕೀರ ಸಿದ್ದರಾಮ ಶ್ರೀಗಳು, ಶ್ರೀ ಮಠಕ್ಕೆ ತೆರಳಿ ಸಕಲ ಪೂಜಾ ಕೈಂಕರ್ಯ ಕೈಗೊಂಡರು.
ಸಂಪ್ರದಾಯದಂತೆ ಸ್ವಾಮೀಜಿ ಸಕಲ ವೈಭವದೊಂದಿಗೆ ಶಿರಹಟ್ಟಿಯ ಶೆಟ್ಟರ ಮನೆಗೆ ತೆರಳಿ ಪೂಜಾ ಕೈಂಕರ್ಯ ಹಾಗೂ ಪ್ರಸಾದ ಸ್ವೀಕರಿಸಿದರು. ನಂತರ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಆಗಮಿಸಿ ಸಂಜೆ 5ಕ್ಕೆ ಶ್ರೀ ಮಠದ ಆವರಣದಲ್ಲಿ ನೆರೆದ ಭಕ್ತ ಸಮೂಹದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಹಾಗೂ ಮಾವಿನ ಹಣ್ಣು ತೂರುತ್ತಾ ಹರಹರ ಮಹಾದೇವ, ಜಯ ಫಕೀರೇಶಾ ಎಂಬ ಘೊಷಣೆಯೊಂದಿಗೆ ರಥವನ್ನು ಎಳೆದು ಭಕ್ತವೃಂದ ಪುನೀತರಾದರು.
Check Also
ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!
Spread the loveನವದೆಹಲಿ: ಗುಜರಾತ್ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …