889 ನೇ ಬಸವ ಜಯಂತಿಯ ನಿಮಿತ್ಯ ಆಂಜನೇಯ ನಗರದಲ್ಲಿ 10 ನೆ ದಿನದ ಲಿಂಗಾಯತ ಧರ್ಮ ಜಾಗೃತಿ ಪಾದಯಾತ್ರೆಯ ನಾಗನೂರು ರುದ್ರಾಕ್ಷಿಮಠದ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಆಂಜನೇಯ ನಗರದ ಎಲ್ಲ ಬಡಾವಣೆಗಳಲ್ಲಿ ಜರುಗಿತು.
ಪಾದಯಾತ್ರೆಯಲ್ಲಿ ಶಿವಾನಂದ ಮಹಾಸ್ವಾಮಿಗಳು ಹಂಡಿಗುಂದ , ಡಾ. ಬಸವಾನಂದ ಸ್ವಾಮೀಜಿ, ಪೂಜ್ಯ ಓಂ ಗುರೂಜಿ, ಕಾರಂಜಿಮಠದ ಪೂಜ್ಯ ಶಿವಾಯೋಗಿ ದೇವರು ಮತ್ತು ಇತರ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ 10 ನೆ ದಿನದ ಪಾದಯಾತ್ರೆಯ ಆಂಜನೇಯ ನಗರದ ಡೈರಿಯಿಂದ ಪ್ರಾರಂಭವಾಗಿ ಗಣಪತಿ ಗುಡಿ ಹತ್ತಿರದ ಅನುಭವ ಮಂಟಪದಲ್ಲಿ ಮಹಾಪ್ರಸಾದ ಕೈಗೊಳ್ಳುವುದರೊಂದಿಗೆ ಮುಕ್ತಾಯವಾಯಿತು. ನಂತರದಲ್ಲಿ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮೀಜಿಗಳು ಎಲ್ಲರಿಗೂ ರುದ್ರಾಕ್ಷಿ ಧಾರಣೆ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶ್ರೀ. ಶಂಕರ ಗುಡಸ, ಶ್ರೀ. ಬಸವರಾಜ್ ರೊಟ್ಟಿ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಶ್ರೀ. ಮಹಾಂತೇಶ್ ಗುಡಸ, ಶ್ರೀ. ರಾಜು ಪದ್ಮಣ್ಣವರ, ಶ್ರೀ. ಶಿವಾನಂದ ವಾಗರವಾಡಿ, ಶ್ರೀ ಸಂಜು ಮರಡಿ ಹಾಗೂ ಬಸವಾದಿ ಪ್ರಮುಖರು ಉಪಸ್ಥಿತರಿದ್ದರು.