Breaking News

ಅಂತಿಮ ದಿನದಂದು ರಕ್ತದೋಕುಳಿ; ಹೋಳಿಯಾಟದ ವೇಳೆ ಚೂರಿ ಇರಿತ, ಕಣ್ಣಿಗೂ ಚುಚ್ಚಿದ್ರು ಚಾಕು..

Spread the love

ಬಾಗಲಕೋಟೆ: ಈ ಊರಲ್ಲಿನ ಅಂತಿಮ ದಿನದಂದು ನಡೆದ ಹೋಳಿಯಾಟ ಅಕ್ಷರಶಃ ರಕ್ತದೋಕುಳಿ ಎಂಬಂತಾಗಿದೆ. ಏಕೆಂದರೆ ಹೋಳಿಯಾಟದಲ್ಲಿ ತೊಡಗಿದ್ದವರ ಪೈಕಿ ಇಬ್ಬರಿಗೆ ಚೂರಿ ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.

ಬಾಗಲಕೋಟೆಯಲ್ಲಿ ಮೂರು ದಿನ ಹೋಳಿ ಹಬ್ಬ ಆಚರಣೆ ಇದ್ದು, ಇಂದು ಮೂರನೇ ದಿನ ಹೋಳಿ ಆಡುವ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ.

ಬಣ್ಣ ಎರಚುವ ವಿಚಾರದಲ್ಲಿ ಉಂಟಾದ ಗಲಾಟೆ ಹಲ್ಲೆಯವರೆಗೂ ತಲುಪಿದೆ.

ಹೋಳಿಯಾಡುತ್ತಿದ್ದ ಅವಿನಾಶ್ (24) ಮತ್ತು ಬಸವರಾಜ (22) ಈ ಘರ್ಷಣೆ ವೇಳೆ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲೂ ಅವಿನಾಶ್ ತುಟಿ ಹಾಗೂ ಕಣ್ಣಿನ ಭಾಗಕ್ಕೆ ಚೂರಿಯಿಂದ ಇರಿದಿದ್ದರೆ, ಬಸವರಾಜನ ಕೆನ್ನೆಗೆ ಚಾಕುವಿನಿಂದ ಗಾಯಗೊಳಿಸಲಾಗಿದೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆ ಮಡುವಿನ ಓಣಿ ಬಳಿ ಘಟನೆ ಸಂಭವಿಸಿದ್ದು, ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ