Breaking News
Home / ರಾಜಕೀಯ / ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದಲೇ ಗ್ಯಾಂಗ್​ ರೇಪ್​;

ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದಲೇ ಗ್ಯಾಂಗ್​ ರೇಪ್​;

Spread the love

ರಾಜಸ್ಥಾನದ ಆಳ್ವಾರನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲೆ ಪ್ರಿನ್ಸಿಪಾಲ್​ ಸೇರಿದಂತೆ ಮೂವರು ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಕಳೆದೊಂದು ವರ್ಷದಿಂದ ಈ ರೀತಿ ದೌರ್ಜನ್ಯವನ್ನು ಎಸಗಿದ್ದಾರೆ. ಇನ್ನು ಈ ಘಟನೆಯನ್ನು ಖಂಡಿಸಿ ವಿದ್ಯಾರ್ಥಿನಿಗೆ ನೆರವಾಗ ಬೇಕಾಗಿದ್ದ ಇಬ್ಬರು ಮಹಿಳಾ ಶಿಕ್ಷಕರು ಈ ಸಾಮೂಹಿಕ ಅತ್ಯಾಚಾರ ಘಟನೆಯನ್ನು ವಿಡಿಯೋ ಮಾಡಿದ್ದಾರೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ದೂರು ದಾಖಲಿಸಲಾಗಿದೆ. ಈ ಪ್ರಕರಣ ವಿಚಾರಣೆ ನಡೆಸುವ ವೇಳೆ ಇದಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಅತ್ಯಾಚಾರದ ಘಟನೆಗಳು ಬೆಳಕಿಗೆ ಬಂದಿದ್ದು, ಈ ಕುರಿತು ಕೂಡ ತನಿಖೆಗೆ ಮುಂದಾಗಿರುವುದಾಗಿ ಮಂಧಾನ ಪೊಲೀಸ್​ ಠಾಣೆ ಅಧಿಕಾರಿ ಮುಖೇಶ್ ಯಾದವ್​ ತಿಳಿಸಿದ್ದಾರೆ.

ಬೆಳಕಿಗೆ ಬಂದ ಮತ್ತಷ್ಟು ಪ್ರಕರಣ

10 ನೇ ತರಗತಿ ವಿದ್ಯಾರ್ಥಿನಿ ಹೊರತಾಗಿ 6, 4 ಮತ್ತು 3ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಾಲ್​ ಮತ್ತು ಇತರೆ ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇನ್ನು ದೌರ್ಜನ್ಯ ಎಸಗಿದ ಬಳಿಕ ಕೊಲೆ ಬೆದರಿಕೆ ಹಾಕಲಾಗಿರುವ ಹಿನ್ನಲೆ ಸಂತ್ರಸ್ತ ಮಕ್ಕಳು ಈ ಕುರಿತು ಎಲ್ಲಿಯೂ ಬಾಯಿ ಬಿಟ್ಟಿಲ್ಲ

ಇದನ್ನು : ಪ್ರಾಯೋಗಿಕ ಪರೀಕ್ಷೆ ನೆಪದಲ್ಲಿ 17 ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ದೌರ್ಜನ್ಯ ನಡೆಸಿದ ಶಾಲಾ ಸಿಬ್ಬಂದಿ

ಘಟನೆ ತನಿಖೆ ನಡೆಸಿದಾಗ ಒಟ್ಟು ನಾಲ್ವರು ಮಕ್ಕಳು ಶಾಲೆಯ ಪ್ರಿನ್ಸಿಪಾಲ್​ ಮತ್ತು ಶಿಕ್ಷಕರು ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ದೂರು ಸಲ್ಲಿಸಿದ್ದಾರೆ.

ಆಮಿಷವೊಡ್ಡಿದ್ದ ಶಿಕ್ಷಕರು
ಇನ್ನು ಘಟನೆ ತನಿಖೆ ನಡೆಸುವ ವೇಳೆ ಈ ಪ್ರಕರಣವನ್ನು ಎಲ್ಲಿಯೂ ತಿಳಿಸದಂತೆ ವಿದ್ಯಾರ್ಥಿನಿಗೆ ಆಮಿಷವೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಆಕೆಯಗೆ ಹಣ ಮತ್ತು ಪುಸ್ತಕ ನೀಡುವ ಆಮಿಷ ತೋರಿಸಿ ಪತ್ರ ಬರೆದುಕೊಟ್ಟಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಇದಾದ ಬಳಿಕ ಮಹಿಳಾ ಶಿಕ್ಷಕಿ, ಪ್ರಿನ್ಸಿಪಾಲ್​ ಸೇರಿದಂತೆ ಮೂವರ ಶಿಕ್ಷಕರ ಮನೆಗೆ ಕರೆದುಕೊಂಡು ಹೋದರು. ಈ ವೇಳೆ ಅವರೆಲ್ಲ ಮದ್ಯ ಸೇವಿಸಿದ್ದರು. ಅವರು ನನ್ನ ಬಟ್ಟೆ ಕಳಚಿ, ಅಸಭ್ಯವಾಗಿ ವರ್ತಿಸಿದರು ಎಂದು ಸಂತ್ರಸ್ತ ಬಾಲಕಿ ತಿಳಿಸಿದ್ದಾಳೆ.

ಇದನ್ನು : ಬೇರೆಯವನನ್ನು ಮದುವೆಯಾಗುತ್ತಿದ್ದ ಪ್ರೇಯಸಿ ಹಣೆಗೆ ಮದ್ವೆ ಮನೆಯಲ್ಲೇ ಸಿಂಧೂರ ಇಟ್ಟುಬಿಟ್ಟ ಪ್ರೇಮಿ, ಮುಂದೆ?

ಪೋಷಕರಿಗೆ ಬೆದರಿಸಿದ್ದ ಪ್ರಾಂಶುಪಾಲರು
ಇನ್ನು ಈ ಘಟನೆ ತಿಳಿದಾಕ್ಷಣ ಸಂತ್ರಸ್ತೆ ತಂದೆಯೊಬ್ಬರು ಈ ಘಟನೆಯ ದೂರು ನೀಡಲು ಶಾಲಾ ಪ್ರಿನ್ಸಿಪಾಲ್​ ಬಳಿ ಹೋದರು. ಈ ವೇಳೆ ನನ್ನ ಸಹೋದರ ಮಂತ್ರಿ ಎಂದು ಪ್ರಾಂಶುಪಾಲರು ಅವರಿಗೆ ಹೆದರಿಸಿದರು. ಒಂದು ವೇಳೆ ಇದನ್ನು ಮೀರಿ ದೂರು ನೀಡಲು ಮುಂದಾದರೆ ಕೊಲೆ ಮಾಡುವುದಾಗಿ ಎಚ್ಚರಿಸಿದರು.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು ಆ ರೀತಿಯಾದ ಯಾವುದೇ ದೂರನ್ನು ನಾವು ಪಡೆದಿಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ