ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನಕ್ಕೆ ಎಲ್ಲರೂ ಮಮ್ಮಲ ಮರಗುತ್ತಿದ್ದಾರೆ. ಈ ಸಾವು ನ್ಯಾಯವೇ ಎನ್ನುತ್ತಿದ್ದಾರೆ. ಇನ್ನು ನಾಡಿನ ಮೂಲೆ ಮೂಲೆಯಲ್ಲಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳ ವತಿಯಿಂದಲೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬೆಳಗಾವಿಯ ಕಪಿಲೇಶ್ವರ ಏರಿಯಾದಲ್ಲಿ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳದ ಪದಾಧಿಕಾರಿಗಳು ಅಗಲಿದ ಕನ್ನಡದ ಕಣ್ಮನಿ, ಯುವರತ್ನ, ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಇರುವ ಬ್ಯಾನರ್ಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜ್ಯೋತಿ ಶೆಟ್ಟಿ, ಬಾಹುಬಲಿ ದೊಡ್ಡನ್ನವರ ಪುನೀತ್ ರಾಜ್ಕುಮಾರ್ ಅವರು ನಮ್ಮ ನಾಡಿನ ಅದ್ಭುತ ಚಿತ್ರನಟರಾಗಿದ್ದರು.
ತಮ್ಮ ಸದಭಿರುಚಿ ಚಿತ್ರಗಳ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆಗೆ ನಾಂದಿ ಹಾಡಿದ್ದರು. ಇವರ ಅಕಾಲಿಕ ಮರಣ ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಪುಷ್ಪಾ ದೇವರ, ಲಕ್ಷ್ಮೀ ನಾಯಿಕ್, ಈಶ್ವರಿ ದೇವರ, ಗೀತಾ, ಮನಿಶಾ ಮೆಣಸೆ, ರಾಘು ನಾಯಿಕ್, ರಮೇಶ ದೇವರ, ಗಣೇಶ, ಸಂತೋಷ ದೇವರ, ರಾಹುಲ್ ಕಾಕತ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.