ಖಾನಾಪುರ – ಇಲ್ಲಿಯ ಎಡಿಎಲ್ಆರ್ ಕಚೇರಿಯ ಸರ್ವೇಯರ್ ಒಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ.
ತಾಲೂಕಿನ ಸುರಾಪುರದ ಶಶಿಕಾಂತ ತಳವಾರ ಎನ್ನುವವರಿಂದ 6 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಡಿಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಯಿತು.
ಒಟ್ಟೂ 10 ಸಾವಿರ ರೂ. ಲಂಚ ಕೇಳಿದ್ದ ಸರ್ವೇಯರ್ ಶಶಿಕಾಂತ ಮದವಾಲ ಈ ಮೊದಲು 4 ಸಾವಿರ ರೂ. ಪಡೆದಿದ್ದ. ಇದೀಗ ಕಚೇರಿಯಲ್ಲೇ 6 ಸಾವಿರ ರೂ. ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ.
ಆರೋಪಿಯನ್ನು ಬಂಧಿಸಲಾಗಿದೆ.