Breaking News
Home / ಅಂತರಾಷ್ಟ್ರೀಯ / ಸರ್ಕಾರದಿಂದ ನಡೆಸಲ್ಪಡುವ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಕ್ಕಳ ನಿರಾಶ್ರಿತರ ಕೇಂದ್ರ (ಶೆಲ್ಟರ್ ಹೋಂ)ನಲ್ಲಿದ್ದ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ ಸೋಂಕು ತಗುಲಿದೆ.

ಸರ್ಕಾರದಿಂದ ನಡೆಸಲ್ಪಡುವ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಕ್ಕಳ ನಿರಾಶ್ರಿತರ ಕೇಂದ್ರ (ಶೆಲ್ಟರ್ ಹೋಂ)ನಲ್ಲಿದ್ದ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ ಸೋಂಕು ತಗುಲಿದೆ.

Spread the love

ಲಕ್ನೋ : ಸರ್ಕಾರದಿಂದ ನಡೆಸಲ್ಪಡುವ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಕ್ಕಳ ನಿರಾಶ್ರಿತರ ಕೇಂದ್ರ (ಶೆಲ್ಟರ್ ಹೋಂ)ನಲ್ಲಿದ್ದ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ ಸೋಂಕು ತಗುಲಿದೆ. ಆ 57 ಅಪ್ರಾಪ್ತರಲ್ಲಿ ಐವರು ಗರ್ಭಿಣಿಯಾಗಿದ್ದಾರೆ. ಕೊರೋನಾ ಸೋಂಕಿತರಲ್ಲದ ಇನ್ನಿಬ್ಬರು ಯುವತಿಯರು ಕೂಡ ಗರ್ಭಿಣಿಯಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ವೈದ್ಯಕೀಯ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.  ಸರ್ಕಾರಿ ಶೆಲ್ಟರ್​ ಹೋಂನಲ್ಲಿರುವ ಈ ಅಪ್ರಾಪ್ತ ಯುವತಿಯರಿಗೆ ಯಾರಿಂದ ಸಾಮೂಹಿಕವಾಗಿ ಕೊರೋನಾ ಸೋಂಕು ತಗುಲಿದೆ? ಅವರು ಗರ್ಭಿಣಿಯಾಗಲು ಯಾರು ಕಾರಣ? ಹಾಗಿದ್ದರೆ ಶೆಲ್ಟರ್​ ಹೋಂಗಳಲ್ಲಿ ಮಹಿಳೆಯರಿಗೆ ಯಾವ ಮಟ್ಟಿಗಿನ ಭದ್ರತೆ ನೀಡಲಾಗುತ್ತಿದೆ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ಈ ಘಟನೆಯಿಂದ ಉದ್ಭವವಾಗಿವೆ.  ಕಾನ್ಪುರದ ಶೆಲ್ಟರ್​ ಹೋಂನಲ್ಲಿರುವ ಇಬ್ಬರು ಅಪ್ರಾಪ್ತೆಯರಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾದ ನಂತರ ಇಡೀ ಶೆಲ್ಟರ್​ ಹೋಂನಲ್ಲಿರುವ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಲ್ಲಿರುವ ಐವರು ಸೋಂಕಿತೆಯರು ಸೇರಿದಂತೆ 7 ಅಪ್ರಾಪ್ತ ಯುವತಿಯರು ಗರ್ಭಿಣಿಯಾಗಿರುವುದು

 

ಪತ್ತೆಯಾಗಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ.    ಕಾನ್ಪುರ ಜಿಲ್ಲೆಯ ಸ್ವರೂಪ್ ನಗರದಲ್ಲಿರುವ ಶೆಲ್ಟರ್ ಹೋಂನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ನಾನಾ ಜಿಲ್ಲೆಗಳಿಂದ ನಿರಾಶ್ರಿತ ಬಾಲಕಿಯರು ಈ ಶೆಲ್ಟರ್​ ಹೋಂನಲ್ಲಿ ಆಶ್ರಯ ಪಡೆದಿದ್ದಾರೆ. ಅವರಲ್ಲಿ ಐವರು ಬಾಲಕಿಯರು ಶೆಲ್ಟರ್​ ಹೊಂಗೆ ಬರುವ ಮೊದಲೇ ಗರ್ಭಿಣಿಯಾಗಿದ್ದರು. ಮಕ್ಕಳ ರಕ್ಷಣಾ ಸಮಿತಿಯ ಶಿಫಾರಸಿನ ಮೇರೆಗೆ ಅವರನ್ನು ಇಲ್ಲಿ ಸೇರಿಸಿಕೊಳ್ಳಲಾಯಿತು ಎಂದು ಆಡಳಿತ ಮಂಡಳಿ ತಿಳಿಸಿದೆ. ಶೆಲ್ಟರ್​ ಹೋಂನಲ್ಲಿರುವ 57 ಬಾಲಕಿಯರಿಗೆ ಸೋಂಕು ತಗುಲಿರೋದು ದೃಢ ಪಡುತ್ತಿದ್ದಂತೆ ಎಲ್ಲರನ್ನು ಕೊರೋನಾ ಚಿಕಿತ್ಸೆಗಾಗಿ ರಾಮ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಐವರು ಅಪ್ರಾಪ್ತೆಯರು ಗರ್ಭಿಣಿ ಆಗಿರುವುದು ತಿಳಿದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸೋಂಕಿಗೆ ಒಳಗಾಗಿರುವ ಬಾಲಕಿಯರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಎಲ್ಲ ಬಾಲಕಿಯರು ವಾಸವಾಗಿದ್ದ ಕಟ್ಟಡವನ್ನು ಸೀಲ್‍ಡೌನ್ ಮಾಡಲಾಗಿದೆ.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ