ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಎಂಜಿನಿಯರ್ ಸಾವಿಗೆ ಕೋವಿಡ್ 19 ವೈರಸ್ ಕಾರಣವಲ್ಲ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸ್ಪಷ್ಟನೆ ನೀಡಿದ್ದಾರೆ.
ಅತಿಯಾದ ಜಾಂಡಿಸ್ ಹಾಗೂ ಶಂಕಿತ ಬ್ಲಡ್ ಕ್ಯಾನ್ಸರ್ ಇತ್ತು. ಹೀಗಾಗಿ ಆತ ನಿನ್ನೆ ಮಧ್ಯಾಹ್ನ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಆತನ ವರದಿ ನೆಗೆಟಿವ್ ಬಂದಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ತಿಳಿಸಿದ್ದಾರೆ.
ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ರಾಜು ನಾಯಕ್ ಎಂಬವರು ಜ್ವರ ನೆಗಡಿ ಕೆಮ್ಮು ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೃತ ವ್ಯಕ್ತಿಯ ರಕ್ತ ಮಾದರಿ ಹಾಗೂ ಗಂಟಲು ದ್ರವ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿತ್ತು.
ವರದಿ ನೆಗೆಟಿವ್ ಬಂದಿದ್ದು, ವ್ಯಕ್ತಿ ಕಾಮಣಿ ರೋಗದಿಂದ ಮೃತ್ತಪಟ್ಟಿದ್ದಾರೆ ವಿನಃ ಅವರ ಸಾವಿಗೆ ಕೋವಿಡ್-19 ಕಾರಣ ಅಲ್ಲ ಎಂದು ಕಿಮ್ಸ್ ವೈದ್ಯರ ಸ್ಪಷ್ಟನೆ ನೀಡಿದ್ದಾರೆ.