ಮಧ್ಯಪ್ರದೇಶದ ಧಾರ್ನಲ್ಲಿ ಇತ್ತೀಚಿಗೆ ನಡೆದ ದೇವಕೃಷ್ಣ ಪುರೋಹಿತ್ ಕೊಲೆ ಪ್ರಕರಣದಲ್ಲಿ ಪತ್ನಿ ಪ್ರಿಯಾಂಕಾಳ ಭೀಕರ ಸಂಚು ಬಯಲಾಗಿದೆ. ತನ್ನ ಪ್ರಿಯಕರ ಕಮಲೇಶ್ ಜೊತೆ ಸೇರಿ ಪತಿಯನ್ನು ಕೊಲೆ ಮಾಡಲು 1 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ ಪ್ರಿಯಾಂಕಾ, ಅದನ್ನು ದರೋಡೆ ಪ್ರಕರಣವೆಂದು ಬಿಂಬಿಸಲು ನಾಟಕವಾಡಿದ್ದಳು. ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೊರಬಂದಿದ್ದು, ಪ್ರಿಯಾಂಕಾ ಮತ್ತು ಕಮಲೇಶ್ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸುರೇಂದ್ರ ಭಾಟಿಗಾಗಿ ಶೋಧ ನಡೆಯುತ್ತಿದೆ.
Laxmi News 24×7