ನಮ್ಮ ಸವದತ್ತಿ ಪಟ್ಟಣದ ಐತಿಹಾಸಿಕ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದ ಸುಸಂದರ್ಭದಲ್ಲಿ ಇಂದು ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ನಮ್ಮ ಜಿಲ್ಲೆಯ ಪ್ರಭಾವಿ ನಾಯಕರಾದ ಶ್ರೀ ಸತೀಶ್ ಜಾರಕಿಹೊಳಿ ಅವರೊಂದಿಗೆ ಪಾಲ್ಗೊಂಡು ತಾಯಿ ಗ್ರಾಮದೇವಿಯ ದರ್ಶನ ಪಡೆದೆವು.
45 ವರ್ಷಗಳ ಬಳಿಕ ಜರುಗುತ್ತಿರುವ ಈ ಮಹೋತ್ಸವದ ಸಂಭ್ರಮಕ್ಕೆ ಸಚಿವರ ಆಗಮನವು ಮತ್ತಷ್ಟು ಮೆರುಗು ನೀಡಿತು. ಸವದತ್ತಿಯ ಸಮಸ್ತ ಜನತೆಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ತಾಯಿಯ ಆಶೀರ್ವಾದ ಸದಾ ಇರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. ಜಾತ್ರಾ ವ್ಯವಸ್ಥೆಗಳ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಕ್ತಾದಿಗಳ ಭಕ್ತಿ ಮತ್ತು ಸಂಭ್ರಮ ಅವಿಸ್ಮರಣೀಯವಾಗಿದೆ.
Laxmi News 24×7