ಕೋಲ್ಕತ್ತಾ: ಕೊಕೇನ್ ಸಾಗಿಸಿದ ಆರೋಪದ ಮೇಲೆ ಬಿಜೆಪಿ ಯುವ ಮುಖಂಡೆ ಎಂ. ಎಸ್. ಗೋಸ್ವಾಮಿ ಯನ್ನು ಕೋಲ್ಕತ್ತಾದಲ್ಲಿ ಶುಕ್ರವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.
ಬಂಗಾಳದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯ (ಯುವ ಮೋರ್ಚಾ) ಅವರ ಪರ್ಸ್ನಲ್ಲಿ ಮತ್ತು ಅವರು ಇದ್ದ ಕಾರಿನ ಸೀಟಿನ ಕೆಳಗೆ ದೊರೆತ ಕೊಕೇನ್ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ.
ಯುವ ಮೋರ್ಚಾದಲ್ಲಿನ ಅವರ ಸ್ನೇಹಿತ ಮತ್ತು ಸಹೋದ್ಯೋಗಿ – ಪ್ರಬೀರ್ ಕುಮಾರ್ ಡೇ ಎಂಬ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂ.ಎಸ್. ಗೋಸ್ವಾಮಿ ಮತ್ತು ಅವರ ಸಹವರ್ತಿ ಎನ್.ಆರ್ ಅವೆನ್ಯೂದ ಕೆಫೆಯೊಂದಕ್ಕೆ ತೆರಳಿದ್ದಾಗ ಪೊಲೀಸರು ಅವರ ಮೇಲೆ ದಾಳಿ ಮಾಡಿದರು.
ಈ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಮುಖಂಡ ಚಂದ್ರಿಮಾ ಭಟ್ಟಾಚಾರ್ಯ ಪ್ರತಿಕ್ರಿಯಿಸಿ, ಈ ಹಿಂದೆ ಕೆಲವು ಬಿಜೆಪಿ ನಾಯಕರು ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಹೆಸರಿಸಲಾಗಿದೆ’ ಸದ್ಯದ ಸ್ಥಿತಿ ನೋಡಿದರೆ ಬಂಗಾಳದಲ್ಲಿ ಬಿಜೆಪಿಯಿಂದ ಹೊರಹೊಮ್ಮುತ್ತಿರುವ ನಿಜವಾದ ಚಿತ್ರ ಎಂದು ಟೀಕಿಸಿದ್ದಾರೆ.