Breaking News

ಸ್ವ ಇಚ್ಛೆಯಿಂದ  ಗಲ್ಲಿ, ಗ್ರಾಮಗಳ ಸಂಪರ್ಕ್ ಬಂದ್ ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧ

Spread the love

ಬೆಳಗಾವಿ:  ಕೊರೊನಾ ಸೋಂಕು ಹತ್ತಿಕ್ಕಲು ಜಿಲ್ಲೆಯಾದ್ಯಂತ ವಿವಿಧ ಗ್ರಾಮಗಳಲ್ಲಿ ಕೆಲವರು  ಸ್ವ ಇಚ್ಛೆಯಿಂದ  ಗಲ್ಲಿ, ಗ್ರಾಮಗಳ ಸಂಪರ್ಕ್ ಬಂದ್ ಮಾಡುತ್ತಿರುವುದರಿಂದ ಪಡಿತರ ಧಾನ್ಯಗಳ ಸಾಗಾಣಿಕೆ ಸೇರಿದಂತೆ ಹಲವು ರೀತಿಯ ತೊಂದರೆಗಳಾಗುತ್ತಿವೆ. ಆದ ಕಾರಣ ರೀತಿ ರಸ್ತೆ ಬಂದ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.ಕೂಡಲೇ ರಸ್ತೆಗಳಿಗೆ ಹಾಕಿರುವ ಬೇಲಿಗಳನ್ನು ತೆಗೆಯಬೇಕು  ಎಂದು ಜಿಲ್ಲಾದಿಕಾರಿಗಳು ತಿಳಿಸಿದ್ದಾರೆ.

ನಗರ ಹಾಗೂ ಜಿಲ್ಲೆಯಲ್ಲಿ ಗ್ರಾಮಗಳಲ್ಲಿ ಬೇರೆ ಜನರು ಗಲ್ಲಿ ಹಾಗೂ ಗ್ರಾಮಗಳಿಗೆ ಬರಬಾರದು. ಅಪರಚಿತರು ಆಗಮಿಸಬಾರದು ಎಂದು ಮುಖಂಡರು ರಸ್ತೆಗಳನ್ನು  ಬಂದ್ ಮಾಡಿದ್ದಾರೆ. ಜೆಸಿಪಿಯಿಂದ ರಸ್ತೆಯನ್ನು ಅಗೆದಿದ್ದಾರೆ. ಇದು ಅಗತ್ಯ ವಸ್ತುಗಳ ಪೂರೈಕೆ, ಪಡಿತರ ಧಾನ್ಯಗಳ ಪೂರೈಕೆಗೆ ತೊಂದರೆಯಾಗುತ್ತಿದೆ.  ಅಲ್ಲದೆ ರಸ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ ಕಾರಣ ನಗರ ಹಾಗೂ ಜಿಲ್ಲೆಯ ಗ್ರಾಮಸ್ಥರು ರಸ್ತೆಗೆ ಹಾಕಿರುವ ಮುಳ್ಳು, ಕಂಟೆಗಳನ್ನು ತೆರವುಗೊಳಿಸಬೇಕು. ಅಗೆದಿರುವ ರಸ್ತೆಗಳನ್ನು ಮುಚ್ಚುವ ಮೂಲಕ ಸಂಚಾರಕ್ಕೆ ಅನೂಕುಲ ಮಾಡಿಕೊಡಬೇಕು ಎಂದರು.

ಅನವಶ್ಯವಾಗಿ ಮನೆಯಿಂದ ಹೊರ ಬರದೆ ಮನೆಯಲ್ಲಿ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ

Spread the loveಗೋಕಾಕ- ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ