Breaking News

ನೀರು ಕುಡಿಯಲು ಬಂದ ಜಿಂಕೆ ಹೊತ್ತೊಯ್ದ ಮೊಸಳೆ; ದಾಂಡೇಲಿಯಲ್ಲಿ ಮತ್ತೆ ಆತಂಕದ ಛಾಯೆ

Spread the love

ಕಾರವಾರ: ಕಾಳಿನದಿಯಲ್ಲಿ ನೀರು ಕುಡಿಯಲು ಬಂದ ಜಿಂಕೆವೊಂದನ್ನು ಮೊಸಳೆ ದಾಳಿ ಮಾಡಿ ಎಳೆದುಕೊಂಡು ಹೋದ ಘಟನೆ ದಾಂಡೇಲಿಯ ಪಟೇಲ ನಗರದ ಬಳಿಯ ಕಾಳಿ ನದಿಯಲ್ಲಿ ನಡೆದಿದೆ.

ಶುಕ್ರವಾರ ಸಂಜೆ ದಾಹ ತೀರಿಸಿಕೊಳ್ಳಲು ಕಾಳಿನದಿಗೆ ಜಿಂಕೆಯೊಂದು ಇಳಿದಿದೆ. ನದಿಯಲ್ಲಿ ಈಜುತ್ತಾ ಮತ್ತೊಂದು ದಡಕ್ಕೆ ತೆರಳುತ್ತಿದ್ದ ಜಿಂಕೆ ಮೇಲೆ ಮೊಸಳೆ ದಾಳಿ ಮಾಡಿ ಎಳೆದೊಯ್ದಿದೆ.

ಘಟನೆ ನಡೆದ ಸ್ಥಳದಲ್ಲಿದ್ದ ಸ್ಥಳೀಯರು ಜಿಂಕೆಯನ್ನು ಕಾಪಾಡಲು ಎಷ್ಟೇ ಆರ್ಭಟಿಸಿದರು, ಕೂಗಾಡಿದರು ಫಲಕಾರಿಯಾಗಲಿಲ್ಲ. ಇತ್ತಿಚೇಗೆ ಇದೇ ಭಾಗದಲ್ಲಿ ಯುವಕನೊಬ್ಬನನ್ನು ಮೊಸಳೆ ನೀರಿನಲ್ಲಿ ಎಳೆದುಕೊಂಡು ಹೋಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಇಲ್ಲಿರುವ ಜನರಲ್ಲಿ ಆತಂಕ ಹೆಚ್ಚಿಸಿದೆ.


Spread the love

About Laxminews 24x7

Check Also

ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಆನಂದ್ ನಗರದಲ್ಲಿ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎನ್.ಸಿ.ಡಿ.ಎಫ್.ಐ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ