Breaking News

ಚುನಾವಣೆ ಕರ್ತವ್ಯ ಲೋಪ: ಬಾಬಾನಗರ ಪಿಡಿಒ ರೇಣುಕಾ ಸಸ್ಪೆಂಡ್

Spread the love

ವಿಜಯಪುರ: ಗ್ರಾ.ಪಂ. ಸದಸ್ಯೆಯೊಬ್ಬರಿಗೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಮತದಾನ ಮಾಡಲು ಅಗತ್ಯವಿಲ್ಲದಿದ್ದರೂ ಸಹಾಯಕರ ಅಗತ್ಯವಿದೆ ಎಂದು ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸೋಲಾಪುರ ಅವರನ್ನು ಅಮಾನತು ಮಾಡಲಾಗಿದೆ.

 

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಗ್ರಾ.ಪಂ. ಪಿಡಿಒ ರೇಣುಕಾ ಸೋಲಾಪುರ ಇವರನ್ನು ಚುನಾವಣೆ ಕರ್ತವ್ಯ ಲೋಪದ ಆರೋಪದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಸುನಿಲ ಕುಮಾರ ಅಮಾನತು ಮಾಡಿದ ಆದೇಶ ಹೊರಡಿಸಿದ್ದಾರೆ.

ಬಾಬಾನಗರ ಗ್ರಾ.ಪಂ. ಸದಸ್ಯೆ ಮುತ್ತವ್ವ ಶ್ರೀಶೈಲ ಗೌಡನವರ ಅವರಿಗೆ ಡಿ.7 ರಂದು ನೀಡಿದ ದೃಢೀಕರಣ ಪ್ರಮಾಣ ಪತ್ರದಲ್ಲಿ ಹೆಬ್ಬೆಟ್ಟು ಸಹಿ ಇದೆ ಎಂದು, ಇದಕ್ಕೂ ಮೊದಲ ಡಿ.6 ರಂದು ನೀಡಿದ ದೃಢೀಕರಣ ಪ್ರಮಾಣ ಪತ್ರದಲ್ಲಿ ಎಂಎಸ್‍ಜಿ ಎಂದೂ ದೃಢೀಕರಿಸಲಾಗಿದೆ. ಒಬ್ಬರೇ ಸದಸ್ಯರಿಗೆ ಎರಡು ರೀತಿಯಲ್ಲಿ ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಅವರನ್ನು ಅಮಾನತು ಮಾಡಲಾಗಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ