Breaking News

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಒಂದು ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಬರೋಬ್ಬರಿ ಒಂದು ಲಕ್ಷ ಮನೆಯ ಒಲೆ ಉರಿಯುತ್ತಿತ್ತು: ಎಸ್​.ನಾರಾಯಣ್

Spread the love

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಒಂದು ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಬರೋಬ್ಬರಿ ಒಂದು ಲಕ್ಷ ಮನೆಯ ಒಲೆ ಉರಿಯುತ್ತಿತ್ತು ಅಂತಾ ನಿರ್ದೇಶಕ ಎಸ್​.ನಾರಾಯಣ್ ನೆನೆದಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಪುನೀತ್​ ಅಂತಿಮ ದರ್ಶನ ಪಡೆದು ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಅವರು..

ಪುನೀತ್ ರಾಜ್​ಕುಮಾರ್ ಬಣ್ಣ ಹಚ್ಚುತ್ತಾರೆ ಎಂದರೆ ಕನಿಷ್ಟ ಒಂದು ಲಕ್ಷ ಮಂದಿ ಮನೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಮನುಷ್ಯನಿಗೆ ಸಾವು ಅನ್ನೋದು ಅಂತಿಮವಾದದ್ದು. ಹೌದು, ಆದರೆ ಅದು ಬರುವ ರೀತಿ ಸರಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಾಲ್ಯದಲ್ಲಿ ರಾಷ್ಟ್ರಪತಿ ಪಡೆದು ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಆಧಾರ ಸ್ಥಂಬವಾಗಿ ನಿಂತಿದ್ದರು. ಅವರ ಜೊತೆ ಅದೆಷ್ಟೋ ಮಂದಿ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದರು. ಸಿನಿಮಾ ಮಾಡಲು ಆಗುತ್ತೋ? ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಅವರಿಗೆ ಅದೆಷ್ಟೋ ಸ್ಕ್ರಿಪ್ಟ್​ಗಳು ಇಂದು ರೆಡಿಯಾಗಿ ಕಾಯುತ್ತಿದ್ದವು.
ಪುನೀತ್​ ಅವರು ನಿಧನರಾಗಿದ್ದಾರೆ ಎಂದು ಹೇಳಿದಾಗ, ನಾನು ನಂಬಲಿಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಂದ್ಕೊಂಡೆ. ಅಷ್ಟಕ್ಕೂ ಸಮಾಧಾನ ಆಗಲಿಲ್ಲ. ಆಸ್ಪತ್ರೆಗೆ ಹೋದೆ, ಅಲ್ಲಿ ಮಲಗಿದ್ದರು. ನನಗೆ ಅವರು ಮೃತಪಟ್ಟಿದ್ದಾರೆ ಎಂದು ಅನಿಸಲಿಲ್ಲ. ನಿದ್ರೆ ಮಾಡುತ್ತಿದ್ದಾರೆ ಅಂದ್ಕೊಂಡೆ. ಯಾಕಂದ್ರೆ 24 ಗಂಟೆಗಳ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೆ. ಈ ಶಾಕ್​ನಿಂದ ಹೊರ ಬರೋದು ತುಂಬಾ ಕಷ್ಟವಾಗುತ್ತಿದೆ ಎಂದು ಭಾವುಕರಾದರು.


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ