Breaking News

ಚರ್ಚ್,‌ಮಸೀದಿ ಬಿಟ್ಟು ದೇವಸ್ಥಾನಗಳ ಮೇಲೆ ಯಾಕೆ ಅಧಿಕಾರಿಗಳ ಕಣ್ಣು : ರೇಣುಕಾಚಾರ್ಯ ಕಿಡಿ

Spread the love

ಬೆಂಗಳೂರು: ಮೈಸೂರಿನಲ್ಲಿ ದೇಗುಲಗಳ ತೆರವು ಕಾರ್ಯದಿಂದ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಪಕ್ಷದವರೇ ಈ ಕಾರ್ಯಕ್ಕೆ ವಿರೋಧಿಸಿದ್ದಾರೆ. ಇದೀಗ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕ ಎಂಪಿ ರೇಣುಕಾಚಾರ್ಯ, ಗುಡುಗಿದ್ದಾರೆ.

ಚರ್ಚ್, ಮಸೀದಿ ಬಿಟ್ಟು ಯಾಕೆ ಅಧಿಕಾರಿಗಳು ಕೇವಲ ದೇವಾಲಯಗಳನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ದೇವಸ್ಥಾನದ ಮೇಲೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡೋದು ಸರಿಯಲ್ಲ. ಈಗಾಗಲೇ 1700 ದೇಗುಲ‌ನೆಲಸಮ ಮಾಡೋದಕ್ಕೆ ನೋಟಿಫಿಕೇಷನ್ ಬಂದಿದೆ. ನಮಗೆ ಚರ್ಚ್, ಮಸೀದಿ ಒಂದೇ. ಆದ್ರೆ ದೇವಸ್ಥಾನವನ್ನೇ ಯಾಕೆ ಟಾರ್ಗೆಟ್ ಮಾಡಿದ್ದಾರೆ.

ಕಾಂಗ್ರೆಸ್ ಹಿಂದುತ್ವ ವಿರೋಧಿ. ಆದ್ರೆ ಬಿಜೆಪಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುವ ಪಕ್ಷ. ಬಿಜೆಪಿಗರು ಹಿಂದೂ, ಮುಸ್ಲೀಂ, ಕ್ರೈಸ್ತ ಎಲ್ಲರಿಗೂ ಗೌರವ ಕೊಡ್ತೇವೆ. ದೇವಸ್ಥಾನಗಳ ಮೇಲೆ ನಮಗೆ ತುಂಬಾ ಗೌರವ ಇದೆ. ಯಾರ ಭಾವನೆಗೆ ಧಕ್ಕೆ ತರಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ