ಅವಳ (ಮಹಿಳೆ) ಕುರ್ಚಿಯಲ್ಲಿ ಇನ್ನಾರೋ ಬಂದು ಕೂರುವ ಸಂಪ್ರದಾಯ ಬಹುತೇಕ ಪಂಚಾಯ್ತಿಗಳಲ್ಲಿದೆ. ಆದರೆ ನಮ್ಮೂರ ಪಂಚಾಯ್ತಿಯಲ್ಲಿ ಮಾತ್ರ ಆ ಜಾಗದಲ್ಲಿ ಅವಳೇ ಕೂತು ಅಧಿಕಾರ ನಡೆಸಬೇಕು. ಮತ್ತೊಬ್ಬರಿಗೆ ಅವಕಾಶ ನೀಡೊಲ್ಲ. ಊರ ಜನರ ಸಮಸ್ಯೆಗೆ ಆಕೆಯೇ ಮುಕ್ತವಾಗಿ ಸ್ಪಂದಿಸಬೇಕು. ಇದು ಇಂದು ನಮ್ಮೆದುರಿಗೆ ಇರುವ ದೊಡ್ಡ ಸವಾಲು ಹೌದು. ಅದನ್ನು ನಿಭಾಯಿಸಿಯೇ ತೀರುತ್ತೇವೆ. ಹೆಣ್ಣು ಮಕ್ಕಳು ಮನೆಯಲ್ಲಿ ಇರಲು ಲಾಯಕ್ಕು, ಅಡುಗೆ ಮನೆಗೆ ಮಾತ್ರ ಸೀಮಿತ ಎಂಬುದು ಈಗ ಸವಕಲು ಮಾತು. ಜಗತ್ತು ಏನಿದೆ ಎಂಬುದನ್ನು ಆಕೆಯೂ ಈಗ ಅರಿತಿದ್ದಾಳೆ. ಹೊರಗಿನ ಪ್ರಪಂಚದ ಜ್ಞಾನವೂ ಅಕೆಗೂ ಇದೆ. ಹೀಗಾಗಿ ಅಧಿಕಾರದ ದಂಡ ಹಿಡಿಯಲು ನಮಗೆ ಯಾರೂ ಊರುಗೋಲು ಆಗಬೇಕಿಲ್ಲ.
ನಸುಕು ಹರಿಯುವ ಮುನ್ನ ಚೊಂಬು ಹಿಡಿದು ಮರೆಯ ಅರಸುತ್ತಾ ಹೋಗುವುದು ನಮ್ಮೂರ ಹೆಣ್ಣುಮಕ್ಕಳಿಗೆ ಜನ್ಮದತ್ತ ಬಳುವಳಿಯಾಗಿ ಬಂದ ಶಾಪ. ಶೌಚಾಲಯ ಕಟ್ಟಿಸಿಕೊಟ್ಟು ಅದನ್ನು ಬಳಸುವುದಕ್ಕೆ ಅವರಲ್ಲಿ ತಿಳಿವಳಿಕೆ ಮೂಡಿಸಿ ಬಯಲು ಬಹಿರ್ದೆಸೆ ಎಂಬ ಕಳಂಕದಿಂದ ಹೊರ ತರಲು ಮುಂದಾಗುವೆ. ಜಾಬ್ ಕಾರ್ಡ್ ಕೊಡಿಸಿ ಉದ್ಯೋಗ ಖಾತರಿಯಡಿ ಅವರಿಗೆ ಕೆಲಸಕೊಡಿಸಿ ಅನ್ನಕ್ಕೆ ದಾರಿ ಮಾಡಿಕೊಡುವೆ. ನನ್ನ ಪಾಲಿಗೆ ಸ್ತ್ರೀ ಅಸ್ಮಿತೆ ಎಂದರೆ ಇದೇ ನೋಡಿ.
Check Also
ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!
Spread the loveಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ …