Breaking News
Home / Uncategorized / ಪುರುಷರಲ್ಲಿ ಹೆಚ್ಚುತ್ತಿರುವ ಲೈಂಗಿಕ ಸಮಸ್ಯೆ, ಪರಿಹಾರವೇನು?

ಪುರುಷರಲ್ಲಿ ಹೆಚ್ಚುತ್ತಿರುವ ಲೈಂಗಿಕ ಸಮಸ್ಯೆ, ಪರಿಹಾರವೇನು?

Spread the love

ಇತ್ತೀಚೆಗೆ ಪುರುಷರಲ್ಲಿ ಲೈಂಗಿಕ ಸಮಸ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಜೀವನಶೈಲಿಯಾಗಿದೆ. ಒತ್ತಡ, ಖಿನ್ನತೆ, ದೈಹಿಕ ವ್ಯಾಯಾಮ ಇಲ್ಲದಿರುವುದು ಈ

ಇತ್ತೀಚೆಗೆ ಪುರುಷರಲ್ಲಿ ಲೈಂಗಿಕ ಸಮಸ್ಯೆ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈ ಸಂಬಂಧ ಲೈಂಗಿಕ ತಜ್ಞರನ್ನು ಸಂಪರ್ಕಿಸುವವರ ಪ್ರಮಾಣ ಹೆಚ್ಚುತ್ತಿದೆ.

ಲೈಂಗಿಕ ಸಮಸ್ಯೆಯಲ್ಲಿ ಎರೆಕ್ಟೈಲ್‌ ಡಿಸ್‌ಫಂಕ್ಷ ನ್‌ ಅಥವಾ ಶಿಶ್ನ ನಿಮಿರುವಿಕೆಯ ಸಮಸ್ಯೆ ಮುಖ್ಯವಾದದ್ದು. ಲೈಂಗಿಕವಾಗಿ ಸಕ್ರಿಯರಾಗಿದ್ದಲ್ಲಿ ವಿವಾಹ ಪೂರ್ವದಲ್ಲಿಯೇ ಈ ತೊಂದರೆ ಕಾಣಿಸಬಹುದು ಅಥವಾ ವಿವಾಹದ ನಂತರ ಲೈಂಗಿಕ ಅತೃಪ್ತಿ ಕಾಣಿಸಬಹುದು. ನಿಮಿರುವಿಕೆಯ ತೊಂದರೆ ಗಂಭೀರ ಹಂತ ತಲುಪಿದಾಗ ಹೃದಯರೋಗ ಅಥವಾ ರಕ್ತನಾಳಗಳ ರೋಗಗಳ ಎಚ್ಚರಿಕೆಯೂ ಇರಬಹುದು. ಈ ಎರಡೂ ಸ್ಥಿತಿಗಳು ದೇಹದಲ್ಲಿ ರಕ್ತನಾಳಗಳು ಕಿರಿದಾಗಲು ದಾರಿಯಾಗಬಹುದು.

ಶಿಶ್ನಕ್ಕೆ ರಕ್ತ ಒಯ್ಯುವ ರಕ್ತನಾಳಗಳು ಕಿರಿದಾಗಲು ಆರಂಭವಾದರೆ ನಿಮಿರುವಿಕೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ‌ ಕಡಿಮೆಯಾಗಬಹುದು. ಮಧುಮೇಹ ಹೊಂದಿರುವ ಪುರುಷರು ಕೂಡ ಇದೇ ರೀತಿ ತೊಂದರೆಗೆ ಗುರಿಯಾಗಬಹುದು. ನಿಮಿರುವಿಕೆಗೆ ಅಗತ್ಯವಾದ ನರಗಳು ಮತ್ತು ರಕ್ತನಾಳಗಳು ಹಾನಿಗೊಳಗಾಗಿರಬಹುದು.

ದೈಹಿಕ ಕಾರಣಗಳು ಮಾತ್ರವಲ್ಲದೇ ಒತ್ತಡ, ಆತಂಕ, ಪಾಪಪ್ರಜ್ಞೆ, ಆತ್ಮಗೌರವದ ಕೊರತೆ ಮತ್ತು ಖಿನ್ನತೆಗಳು ಶೇ. 10ರಿಂದ ಶೇ. 20ರಷ್ಟು ಪ್ರಕರಣಗಳಲ್ಲಿ ಶಿಶ್ನ ನಿಮಿರುವಿಕೆಯ ತೊಂದರೆ ಉಂಟುಮಾಡಬಹುದು. ಆದ್ದರಿಂದ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಸೂಕ್ತ. ಜೀವನಶೈಲಿ ಬದಲಾವಣೆ ಮೂಲಕ ಇಂಥದ್ದೊಂದು ಸಮಸ್ಯೆಯಿಂದ ದೂರ ಇರಬಹುದು.

ಪರಿಹಾರ

* ಧೂಮಪಾನ, ಮದ್ಯಪಾನ ಸೇರಿದಂತೆ ಇತರೇ ದುಶ್ಚಟಗಳಿಂದ ದೂರವಿರಿ.
* ದೈಹಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿ, ಜಿಮ್‌ನಲ್ಲಿ ವರ್ಕೌಟ್‌ ಮಾಡಿ.
* ಬೆಳಗಿನ ಹೊತ್ತು ಜಾಗಿಂಗ್‌ ಅಥವಾ ಬಿರುಸಿನ ನಡಿಗೆ ಮಾಡಿ.

ಕೆಳಸೊಂಟದ ಮಾಂಸಖಂಡ ದುರ್ಬಲವಾಗುವುದು ಶಿಶ್ನ ನಿಮಿರುವಿಕೆಯ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ಮಾಂಸಖಂಡಗಳನ್ನು ಹುರಿಗೊಳಿಸುವ ವ್ಯಾಯಾಮಗಳಾದ ಜಾಗಿಂಗ್‌, ದೇಹದ ಕೆಳಭಾಗವನ್ನು ಹಿಗ್ಗಿಸುವ ಸ್ಟ್ರೆಚ್ಚಿಂಗ್‌ ವ್ಯಾಯಾಮಗಳನ್ನು ಮಾಡಿ.

ಮನೆಯೊಳಗೆ ಟ್ರೆಡ್‌ಮಿಲ್‌ ಮೇಲೆ ಓಡುವುದಕ್ಕಿಂತಲೂ ಜನರು ಆದಷ್ಟು ಹೊರಾಂಗಣ/ಉದ್ಯಾನಗಳಲ್ಲಿ ಜಾಗಿಂಗ್‌ ಅಥವಾ ನಡಿಗೆಗಳನ್ನು ಕೈಗೊಳ್ಳುವುದು ಉತ್ತಮ. ತಾಜಾ ಹವೆ ಮತ್ತು ನೈಸರ್ಗಿಕ ವಾತಾವರಣ ಒತ್ತಡ ನಿವಾರಿಸಲು ನೆರವಾಗುತ್ತದೆ.

ಒತ್ತಡ ಸಂಬಂಧಿ ಸಮಸ್ಯೆಯಿಂದ ಹೊರ ಬಂದು ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಕ್ಷಣಗಳನ್ನು ಕಳೆಯಿರಿ.


Spread the love

About Laxminews 24x7

Check Also

ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ

Spread the loveನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹುಬ್ಬಳ್ಳಿ, ಏಪ್ರಿಲ್ 28: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ