Breaking News

ಕೊರೊನಾ ಕಂಟ್ರೋಲ್‍ಗೆ ದೊಣ್ಣೆ ಅಸ್ತ್ರ ಪ್ರಯೋಗ

Spread the love

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಕೊರೊನಾ ಟೆಸ್ಟ್ ಮಾಡಿಸುವಂತೆ ‘ದೊಣ್ಣೆ ನಾಯಕರು’ ಎಂಟ್ರಿ ಕೊಟ್ಟಿದ್ದಾರೆ.ಹೌದು. ಬೆಂಗಳೂರಿನಲ್ಲಿ ಟಾರ್ಗೆಟ್ ಟಾರ್ಚರ್ ಗೆ ಫೀಲ್ಡ್ ವಾರಿಯರ್ಸ್ ನಯಾ ಐಡಿಯಾವೊಂದನ್ನು ಹುಡುಕಿಕೊಂಡಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಬಾರದ ಜನರ ಮೇಲೆ ಬಿಬಿಎಂಪಿ ದೊಣ್ಣೆ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ.

ಬಸ್ ಸ್ಟ್ಯಾಂಡ್ ಗಳಲ್ಲಿ ಟೆಂಟ್ ಹಾಕಿಕೊಂಡು, ದೊಣ್ಣೆ ಇಟ್ಕೊಂಡೇ ಸಿಬ್ಬಂದಿ ಜನಸಾಮಾನ್ಯರನ್ನು ಗುಡ್ಡೆ ಹಾಕಿ ಟೆಸ್ಟಿಂಗ್ ಗೆ ಕರೆದೊಯ್ಯುತ್ತಿದ್ದಾರೆ. ಬಿಎಂಟಿಸಿ ಬಸ್ಸಿನಲ್ಲಿ ಇಳಿದ ಒಬ್ಬರನ್ನೂ ಬಿಡುತ್ತಿಲ್ಲ. ಟಾರ್ಗೆಟ್ ರೀಚ್ ಟಾರ್ಚರ್ ಗೆ ಈಗ ಸಿಬ್ಬಂದಿ ಬಸ್ ನಲ್ಲಿ ಬರೋ ಪ್ರಯಾಣಿಕರ ಮೇಲೆ ಕಣ್ಣು ಹಾಕಿದ್ದಾರೆ. ಕೆ.ಆರ್ ಮಾರ್ಕೆಟ್ ನಲ್ಲಿ ಬಸ್ ಇಳಿಯೋದೇ ತಡ ದೊಣ್ಣೆ ಇಟ್ಕೊಂಡು ಜನರ ಬಳಿ ಸಿಬ್ಬಂದಿ ಬಂದು ಕೊರೊನಾ ಟೆಸ್ಟ್ ಮಾಡಿಸುವಂತೆ ತಾಕೀತು ಮಾಡುತ್ತಾರೆ. ಟೆಸ್ಟಿಂಗ್ ಮಾಡಲ್ಲ ಅಂದ್ರೆ ಸಿಬ್ಬಂದಿ ಅವಾಜ್ ಹಾಕುತ್ತಾರೆ.

ದೊಣ್ಣೆ ಇಟ್ಕೊಂಡು ಬರೋ ಸಿಬ್ಬಂದಿ ನೋಡಿಯೇ ಜನ ಭಯದಿಂದ ಟೆಸ್ಟ್ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳೋಕೆ ಜನ ಹಿಂದೇಟು ಹಾಕುವ ಬೆನ್ನಲ್ಲೇ ಈಗ ಹೊಸ ಪ್ಲಾನ್ ರೂಪಿಸಿದ್ದಾರೆ.

 


Spread the love

About Laxminews 24x7

Check Also

ಗವರ್ನರ್ V/S ಗವರ್ನಮೆಂಟ್‌: ಭಾಷಣದ ಕೆಲ ಸಾಲು ಬದಲಾವಣೆಗೆ ನಿರ್ಧಾರ; ಒಪ್ಪದಿದ್ದರೆ ಕಾನೂನು ಹೋರಾಟವೆಂದ ಸರ್ಕಾರ

Spread the loveಬೆಂಗಳೂರು: ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ನಡುವೆ ಸಂಘರ್ಷ ಶುರುವಾದಂತಿದೆ‌. ಇಂದು ವಿಶೇಷ ಅಧಿವೇಶನಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ