ಕೊರೊನಾ ಎಫೆಕ್ಟ್ ಹಿನ್ನೆಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಆಯೋಜಿಸಿದ್ದ ನಿಖಿಲ್ ಮದುವೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಹೆಚ್ಡಿಕೆ ಕುಟುಂಬ ತೀರ್ಮಾನಿಸಿದೆ ಎನ್ನಲಾಗಿದೆ.
ರಾಮನಗರದ ಸುಮಾರು 60 ಎಕರೆ ಜಮೀನಿನಲ್ಲಿ ಈಗಾಗಲೇ ಸಿದ್ಧತೆ ನಡೆದಿತ್ತು. ಜಾನಪದ ಲೋಕದ ಜಮೀನಿನಲ್ಲಿ ಈಗಾಗಲೇ 6 ಕೊಳವೆಬಾವಿ ಕೊರೆಸಲಾಗಿತ್ತು ಆದರೆ ಕೊರೊನಾ ಭೀತಿಯಿಂದ ಸ್ಥಳ ಬದಲಾವಣೆ ಮಾಡುವ ಸಂಭವ ಇದೆ. ದೇವೆಗೌಡ ಅವರೊಂದಿಗೆ ಕುಮಾರಸ್ವಾಮಿ ಅವರು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರಂತೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೆ ಹೊರಬೀಳಬೇಕಿದೆ.
ಕುಮಾರಸ್ವಾಮಿ ಸಿದ್ಧತೆ
ಕೊರೊನಾ ಭೀತಿಯಿಂದ ಮದುವೆ ಸ್ಥಳಾಂತರ
ಕೊರೋನಾ ಎಫೆಕ್ಟ್ ನಿಂದ ಮದುವೆ ಸ್ಥಳಾಂತರಿಸುವ ನಿರ್ಧಾರದಿಂದ ಹೆಚ್ಡಿಕೆ ಕುಟುಂಬ ಬೇಸರದಲ್ಲಿ. ಆದರೂ ನಿರ್ಧಾರವಾಗಿರೋ ಶುಭಮಹೂರ್ತದಲ್ಲಿ ಪ್ರೀತಿಪಾತ್ರ ಪುತ್ರ ನಿಖಿಲ್ ವಿವಾಹ ನಡೆಸಲು ಹೆಚ್ಡಿಕೆ ಸಿದ್ಧತೆ.
Laxmi News 24×7