Breaking News

ಮಾತು ಕೇಳದ ಅಧಿಕಾರಿಗಳನ್ನ ಕೆಲಸದಿಂದ ವಜಾ ಮಾಡ್ತೀನಿ: ಬಸವರಾಜ ರಾಯರೆಡ್ಡಿ ವಾರ್ನಿಂಗ್‌

Spread the love

ಕೊಪ್ಪಳ: ಯಾವ ಅಧಿಕಾರಿ ಮಾತು ಕೇಳಲ್ಲ ಹೇಳಿ, ಮಾತು ಕೇಳದ ಅಧಿಕಾರಿಗಳನ್ನ ಕೆಲಸದಿಂದ ವಜಾ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಖಡಕ್‌ ಎಚ್ಚರಿಕೆ ನೀಡಿದರು.

ಕೊಪ್ಪಳದ ಗುನ್ನಾಳ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೇ ವೇಳೆ ನಾನು ಫುಲ್ ಬ್ಯುಸಿ ಇರ್ತೇನೆ. ಡಿಜಿಟಲ್ ಸಿಗ್ನೇಚರ್ ಮಾಡಿ ಲೆಟರ್ ಕೊಟ್ಟುಬಿಡಿ ಎಂದು ಪಿಎಗೆ ಸೂಚಿಸಿದರು.

ಯಾರು ಮಾತು ಕೇಳುವುದಿಲ್ಲ ನನಗೆ ಹೇಳು, ಅವರನ್ನ ಫೈರ್‌ (ಕೆಲಸದಿಂದ ವಜಾ) ಮಾಡುತ್ತೇನೆ ಎಂದ ರಾಯರೆಡ್ಡಿ, ತಹಶೀಲ್ದಾರ್ ನೀನು ನನ್ನ ಪಿಆರ್‌ಓ ಆಗಿ ಕೆಲಸ ಮಾಡಬೇಕು ಎಂದು ವೇದಿಕೆಯಲ್ಲೇ ನಿಂತು ಸೂಚಿಸಿದರು.

ಪ್ರಕಾಶ್ ನಾಶಿ ಯಲಬುರ್ಗಾ ತಹಶೀಲ್ದಾರ್ ಆಗಿದ್ದಾರೆ. ನಾನು ಫುಲ್ ಬ್ಯುಸಿ ಇರುತ್ತೇನೆ. ಹೀಗಾಗಿ ನೀನು ಪಿಆರ್‌ಓ ರೀತಿ ಕೆಲಸ ಮಾಡಬೇಕು. ಈ ಇಲಾಖೆ ಬಹಳ ಕಾರ್ಯಭಾರದ ಇಲಾಖೆ, 1.52 ಕೋಟಿ ವಿದ್ಯಾರ್ಥಿಗಳು ಓದುತ್ತಾರೆ. 96 ವಿಶ್ವವಿದ್ಯಾಲಯಗಳಿವೆ. ಈ ಇಲಾಖೆಯಲ್ಲಿ ಇಲ್ಲಿ ಏನು ಇಲ್ಲ. ಅವರು ಏನು ನಮಗೆ ಕೊಟ್ಟು ಹೋಗುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಯಾವುದೇ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಮಹದೇವಪ್ಪಣ್ಣ ನನಗೆ ತಂದೆ ಸಮಾನ, ಅವರೇ ಆ ಮನೆಯಲ್ಲಿರಲಿ: ಬೈರತಿ ಸುರೇಶ್

Spread the loveಬೆಂಗಳೂರು: ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ