Breaking News

ಮೌಲ್ಯ ವೃದ್ಧಿಗೆ ಉಪನ್ಯಾಸ ಸಹಕಾರಿ

Spread the love

ಇಟಗಿ: ಯುವಕರಲ್ಲಿ ಇತಿಹಾಸ ಪ್ರಜ್ಞೆ ಮತ್ತು ಸಾಂಸ್ಕೃತಿಕ ಮೌಲ್ಯ ವೃದ್ಧಿಸುವಲ್ಲಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಅವಶ್ಯ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಹಲಸಿ ಗ್ರಾಮದ ಐತಿಹಾಸಿಕ ಭೂವರಾಹ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಕದಂಬ ಯುವ ಸೇನೆ, ಅಂಬೇಡ್ಕರ ಯುವಕ ಮಂಡಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಕರ್ನಾಟಕ ವಿದ್ಯಾವರ್ಧಕ ಸಂಘ ಕಳೆದ 120 ವರ್ಷಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಉಳಿವಿಗಾಗಿ ನಿರಂತರ ಶ್ರಮಿಸುತ್ತಿದೆ. ಇದರೊಟ್ಟಿಗೆ ಯುವಜನರು ಬೆರೆತು ಕೈಜೋಡಿಸಬೇಕು ಎಂದರು.
ಪ್ರೊ.ಡಾ.ಎಚ್.ಬಿ.ಕೋಲಕಾರ ಮಾತನಾಡಿ, ಸ್ಥಗಿತಗೊಂಡ ಹಲಸಿಯ ಕದಂಬೋತ್ಸವ ಮರು ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂದರು.  ವಿಶ್ವನಾಥ ಚಿಕ್ಕಮಠ, ಶ್ರೀಧರ ಗಣಾಚಾರಿ, ಬಸವರಾಜ ಗೋಡಗೇರಿ ಸೇರಿದಂತೆ ವಿವಿಧ ಕವಿಗಳು ಕವನ ವಾಚನ ಮಾಡಿದರು.  ಪ್ರದೀಪ ಪಾರಿಪತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ವಿಜಯ ಬಡಿಗೇರ, ಬಸವರಾಜ ಗಾರ್ಗಿ, ಬಿ.ಬಿ.ಕಾದ್ರೋಳ್ಳಿ, ಪ್ರಾಚಾರ್ಯರಾದ ಆರ್.ಬಿ.ಹುಣಶೀಕಟ್ಟಿ, ಕೆ.ಬಿ.ಕಾಪೋಲಿ, ಕರವೇ ತಾಲೂಕಾಧ್ಯಕ್ಷ ವಿಠ್ಠಲ ಹಿಂಡಲಕರ, ಮುರಗೇಶ ಶಿವಪೂಜಿ, ಜಗದೀಶ ಹೊಸಮನಿ, ಕೆ.ಎಸ್.ಬಾಳೆಕುಂದರಗಿ, ಪರಶುರಾಮ ಮಾದಾರ, ಅಭಿಲಾಷ ಬಾಳೆಕುಂದರಗಿ ಇತರರಿದ್ದರು.

Spread the love

About Laxminews 24x7

Check Also

ಸತ್ತಿಗೇರಿ ಗ್ರಾಮದಲ್ಲಿ ಜಲ ಸಂಗ್ರಹಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ

Spread the loveಸತ್ತಿಗೇರಿ: ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು ಮುಖ್ಯ ಧ್ಯೇಯವಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ