ಬೆಂಗಳೂರು: ಡಿಸಿಎಂಗಳ ಹುದ್ದೆಬೇಡವೇ ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಭಾವಿ ಸಿಎಂ ಡಿಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಪ್ರಸ್ತಾಪ ಇಟ್ಟಿದ್ದಾರೆ.
ನೂತನ ಕ್ಯಾಬಿನೆಟ್ಗೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಈ ಪ್ರಸ್ತಾಪ ನಡೆದಿದೆ.
ದಲಿತ, ಲಿಂಗಾಯತ, ಅಲ್ಪಸಂಖ್ಯಾತ, ಓಬಿಸಿ ಸಮುದಾಯಗಳಿಗೆ ಮಣೆ ಹಾಕಬೇಕು. ಯಾರಿಗಾದರೂ ಇಬ್ಬರಿಗೆ ಕೊಟ್ಟರೂ ಅಸಮಾಧಾನ ಸಾಧ್ಯತೆಯಿದೆ. ನಾಲ್ಕು ಡಿಸಿಎಂ ಸೃಷ್ಟಿ ಮಾಡಿದ್ರೆ ಹಾಸ್ಯಾಸ್ಪದ ಎಂದು ಹೈಕಮಾಂಡ್ ಬಳಿ ಪ್ರಸ್ತಾಪವಿಟ್ಟಿದ್ದಾರೆ.
ಈ ಕುರಿತು ಸೋಮವಾರ ರಾಹುಲ್ ಮುಂದೆ ತೀರ್ಮಾನ ಮಾಡೋಣ ಎಂದು ಕೆ.ಸಿ ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಡಿಸಿಎಂಗಳ ಹುದ್ದೆ ಸೃಷ್ಟಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
Laxmi News 24×7