ಬೆಳಗಾವಿ: ಇಲ್ಲಿನ ಮರಾಠ ಲಘು ಪದಾತಿದಳ (ಎಂಎಲ್ಐಆರ್ಸಿ) ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾದ 16ನೇ ಭೈರವ್ ಬೆಟಾಲಿಯನ್ ತರಬೇತಿ ಪೂರ್ಣಗೊಂಡಿದ್ದು, ಶನಿವಾರ ನಡೆದ ಸಮಾರಂಭದಲ್ಲಿ ನೂತನ ಪಡೆಯನ್ನು ಸ್ಥಾಪನಾ ಸಮಾರಂಭದ ಮೂಲಕ ಭಾರತೀಯ ಸೇನೆಗೆ ಸೇರಿಸಲಾಯಿತು.
ಅತ್ಯುನ್ನತ ಮಟ್ಟದ ತರಬೇತಿ ಪಡೆದ ಆಯ್ದ ಯೋಧರನ್ನು ಈ ಪಡೆಯಲ್ಲಿ ಸೇರಿಸಲಾಗಿದ್ದು, ಶನಿವಾರ ಎಂಎಲ್ಐಆರ್ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್ದೀಪ್ ಮುಖರ್ಜಿ, ನೂತನ ಪಡೆಯ ಧ್ವಜವನ್ನು ಆಫೀಸರ್ ಕಮಾಂಡಿಂಗ್ಗೆ ಹಸ್ತಾಂತರಿಸಿದರು.
ಇಂದಿನ ಸಂಕೀರ್ಣ ಭದ್ರತಾ ಸನ್ನಿವೇಶಗಳಲ್ಲಿ ಕಾರ್ಯಾಚರಣೆ ಸಾಮರ್ಥ್ಯ ಚುರುಕುಗೊಳಿಸಲು ಭಾರತೀಯ ಸೇನೆಗೆ ಒಂದು ಬಲವಾಗಿ ನಿಲ್ಲುವ ಈ ಬಟಾಲಿಯನ್ ವಿಶೇಷ ಕಾಲಾಳುಪಡೆಯಾಗಿದ್ದು, ಹೆಚ್ಚಿನ ಚಲನಶೀಲತೆಯ ಕಾರ್ಯಾಚರಣೆ, ಹೊಂದಾಣಿಕೆ ಕೌಶಲಗಳು ಮತ್ತು ವಿಶೇಷವಾಗಿ ಕಡಿದಾದ ಪರ್ವತ ಪ್ರದೇಶಗಳು ಹಾಗೂ ಬಂಡಾಯ ವಿರೋಧಿ, ಭಯೋತ್ಪಾದನಾ ವಿರೋಧಿ ಪರಿಸರದಲ್ಲಿ ನಿಖರ ದಾಳಿ ನಡೆಸುವಲ್ಲಿ ಪ್ರಾವೀಣ್ಯ ಹೊಂದಿದೆ.
Laxmi News 24×7