ಶ್ರೀ ವಿವೇಕಾನಂದ ಕೇಂದ್ರದಲ್ಲಿ ಯೋಗಾಭ್ಯಾಸ ಮಾಡುತ್ತಿರುವ 6 ವರ್ಷದ ಬಾಲಕಿ ಕು. ನೈರಾ ಕೊಣ್ಣೂರ
ಹಾಗೂ ಕು ಪೂರ್ವಿ ಗುಡಸಿ ಮೂರು ವರ್ಷಗಳಿಂದ ಯೋಗಾಭ್ಯಾಸ ಮಾಡುವುದರ ಜೊತೆಯಲ್ಲಿ ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮತ್ತು ಕಠಿಣ ಆಸನಗಳನ್ನು ಮಾಡುವುದನ್ನು ಗಮನಿಸಿ ಅವರಿಗೆ ಪ್ರತಿಫಲ ಫೌಂಡೇಶನ (ರಿ) ಧಾರವಾಡ ಇವರಿಂದ 09/05/2026 ಶನಿವಾರದಂದು, ಧಾರವಾಡದ ಆಲೂರು ವೆಂಕಟರಾವ ಸಭಾ ಭವನದಲ್ಲಿ ಹಮ್ಮಿಕೊಂಡ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಡಾ ಎಸ್ ಜಿ ಸುಶೀಲಮ್ಮ ಹಾಗೂ ಗಣ್ಯರು ಈ ಎರಡು ಮಕ್ಕಳಿಗೆ “ಯೋಗ ರತ್ನ ಪ್ರಶಸ್ತಿ ” ನೀಡಿ ಗೌರವಿಸಲಿದ್ದಾರೆ.
Laxmi News 24×7