ಬೆಂಗಳೂರು: ಯಾವಾಗಲೂ ಹೈ ಸೆಕ್ಯೂರಿಟಿ, ಸಿಸಿಟಿವಿ ಕಣ್ಗಾವಲು, ಅನುಮತಿ ಇಲ್ಲದೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲದ ಸಚಿವ ಜಮೀರ್ ಅಹ್ಮದ್ ಅವರ ಐಷಾರಾಮಿ ಮನೆಯಲ್ಲೇ ಈಗ ಭಾರೀ ಕಳ್ಳತನ ನಡೆದಿದೆ! ಆದರೆ ಇಲ್ಲಿ ಕನ್ನ ಹಾಕಿದ್ದು ಯಾರೋ ಹೊರಗಿನ ಕಳ್ಳರಲ್ಲ, ಬದಲಾಗಿ ಸ್ವಂತ ಸಂಬಂಧಿಕನೇ ಎಂಬುದು ಈಗ ಬಯಲಾಗಿದೆ.
ಏನಿದು ಘಟನೆ?
ಜಮೀರ್ ಅಹ್ಮದ್ ಅವರ ತಾಯಿಯ ಹತ್ತಿರದ ಸಂಬಂಧಿ ಸೈಯದ್ ಅಮೀನ್ ಮತ್ತು ಆತನ ಸ್ನೇಹಿತ ಅಮೀರ್ ಅಹ್ಮದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸೈಯದ್ ಅಮೀನ್ ಸಚಿವ ಜಮೀರ್ ಅವರ ಮನೆಗೆ ‘ಅತ್ತೆ ಅತ್ತೆ’ ಎಂದು ಪದೇ ಪದೇ ಬರುತ್ತಿದ್ದ. ನಂಬಿಕಸ್ಥನಂತೆ ನಟಿಸಿ 2023 ರಿಂದಲೇ ಹಂತ ಹಂತವಾಗಿ ಸುಮಾರು 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿದ್ದಾನೆ!
ಕಳ್ಳತನಕ್ಕೆ ಕಾರಣವಂತೆ ಬ್ಯುಸಿನೆಸ್ ಲಾಸ್!
ಆರೋಪಿ ಸೈಯದ್ ಅಮೀನ್ ಟ್ರಾವೆಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದ. ಆದರೆ ಕೋವಿಡ್ ಸಮಯದಲ್ಲಿ ವ್ಯಾಪಾರ ನಷ್ಟವಾಗಿ ಸಾಲದ ಸುಳಿಗೆ ಸಿಲುಕಿದ್ದ.
ಎಲ್ಲೂ ಸಾಲ ಸಿಗದಿದ್ದಾಗ ತನ್ನ ಸ್ನೇಹಿತ ಅಮೀರ್ ಜೊತೆ ಸೇರಿ ಸಚಿವರ ಮನೆಯಲ್ಲೇ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ. ಕದ್ದ ಒಡವೆಗಳನ್ನು ಅಡವಿಟ್ಟು ಆ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸುವ ಕನಸು ಕಂಡಿದ್ದ! 🏦
ಸಿಕ್ಕಿಬಿದ್ದಿದ್ದು ಹೇಗೆ?
ಒಡವೆ ಕದ್ದ ಮೇಲೆ ಅಮೀನ್ ಜಮೀರ್ ಅವರ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಸಚಿವರ ತಾಯಿ ಫೋನ್ ಮಾಡಿದರೂ ರಿಸೀವ್ ಮಾಡುತ್ತಿರಲಿಲ್ಲ. ಯಾವಾಗ ಇವನ ಮೊಬೈಲ್ ಸ್ವಿಚ್ ಆಫ್ ಆಯಿತೋ, ಪೊಲೀಸರಿಗೆ ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಕಥೆ ಬಯಲಾಗಿದೆ. ಪೊಲೀಸರು ಬಂಧಿತರಿಂದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Laxmi News 24×7