ಕಾಂಗ್ರೆಸ್ ಮನೆಹಾಳ ಕೆಲಸಕ್ಕೆ ರಾಜ್ಯದ ತೆರಿಗೆಗೆ ಕೊಕ್ಕೆ!!!
ಆರ್.ಸಿ.ಬಿ ಕಾಲ್ತುಳಿತದ ರಿಪೋರ್ಟ್’ನಲ್ಲಿ ಯಾವುದೇ ಹುರುಳಿರಲ್ಲ; ಪ್ರತಿಪಕ್ಷ ನಾಯಕ ಆರ್. ಅಶೋಕ್
ಆರ್.ಸಿ.ಬಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ವರದಿ ನೀಡದಿದ್ದರೂ ನಡೆಯುತ್ತೆ.
ಯಾಕೆಂದರೇ, ಅದರಲ್ಲಿ ಆರ್.ಸಿ.ಬಿಯನ್ನೇ ಗುರಿಯಾಗಿಸಲಾಗಿರುತ್ತದೆ. ಅದರಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ ಸರ್ಕಾರದ ತಪ್ಪಿಗೆ ರಾಜ್ಯದ ಕ್ರಿಕೆಟ್ ಮ್ಯಾಚ್’ಗಳು ಬೇರೆ ರಾಜ್ಯಕ್ಕೆ ಶಿಫ್ಟ್ ಆಗಿ, ನಮ್ಮ ತೆರಿಗೆಗೆ ಕೊಕ್ಕೆ ಬಿದ್ದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರವಾಗಿ ಆರೋಪಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಆರ್.ಸಿ.ಬಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ವರದಿ ನೀಡದಿದ್ದರೂ ನಡೆಯುತ್ತೆ. ಯಾಕೆಂದರೇ, ಅದರಲ್ಲಿ ಆರ್.ಸಿ.ಬಿಯನ್ನೇ ಗುರಿಯಾಗಿಸಲಾಗಿರುತ್ತದೆ. ಅದರಲ್ಲಿ ಯಾವುದೇ ಹುರುಳಿಲ್ಲ. ಮನೆ ಹಾಳ ಕಾಂಗ್ರೆಸ್ ಸರ್ಕಾರದಿಂದಾಗಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಎಲ್ಲ ಕ್ರಿಕೆಟ್ ಪಂದ್ಯಗಳು ಬೇರೆ ರಾಜ್ಯಕ್ಕೆ ವರ್ಗಾವಣೆಯಾಗುತ್ತಿವೆ.
ಹೊಟೇಲ್ ವ್ಯವಸಾಯದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಕೋಟ್ಯಾಂತರ ರೂಪಾಯಿ ತೆರಿಗೆಗೂ ಕೊಕ್ಕೆ ಬಿದ್ದಂತಾಗಿದೆ. ಸರ್ಕಾರ ತನ್ನ ತಪ್ಪು ಮಾಡಿದೆ. ಕಾಂಗ್ರೆಸ್ ಕೊಲೆಗಡುಕರ ಸರ್ಕಾರ. ಇವರಿಂದಲೇ 11 ಜನರು ಸಾವನ್ನಪ್ಪಿದ್ದಾರೆ ಎಂದರು.
Laxmi News 24×7