ಘಟಪ್ರಭಾದಲ್ಲಿ ತಹಶೀಲ್ದಾರರಿಂದ ಸಮೀಕ್ಷೆ ಕಾರ್ಯ!
ಘಟಪ್ರಭಾ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕಾಗಿ ಮಾನ್ಯ ಗೋಕಾಕ ತಹಶೀಲ್ದಾರರಾದ ಮೋಹನ್ ಭಸ್ಮೆ ಅವರು ಮಂಗಳವಾರ ದಂದು ಭಾಗವಹಿಸಿದ್ದರು.
ಪ್ರತಿ ಮನೆ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮೀಕ್ಷೆ ಕಾರ್ಯ ನಡೆಸಿದರು.
ಪುರಸಭೆ ಘಟಪ್ರಭಾ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಮ್.ಎಸ್.ಪಾಟೀಲ, ಸಿಬ್ಬಂದಿಗಳಾದ ರಮೇಶ
ಗಂಡವ್ವಗೋಳ, ಲಕ್ಷ್ಮಣ ಹುಣಶ್ಯಾಳೆ, ಅಕ್ಷಯ ಮನಗಾಂವಿ ಹಾಗೂ ಆಶಾ ಕಾರ್ಯಕರ್ತೆ, ಅಂಗನವಾಡಿ ಶಿಕ್ಷಕಿಯರು ಸಂಯೋಜನೆ ಯೊಂದಿಗೆ ಇನ್ನುಳಿದ ಸಮೀಕ್ಷೆಯನ್ನು ಕಾರ್ಯವನ್ನು ನಡೆಸಲಾಗುತ್ತಿದೆ.
Laxmi News 24×7