ಬೆಳಗಾವಿ : ದೇವರಾಜ ಅರಸು ಕಾಲನಿಯಲ್ಲಿ ನಮೋಕಾರ ಮಂತ್ರ ದಿನಾಚರಣೆ
ಬೆಳಗಾವಿ ಬಸವನ ಕುಡಚಿಯಲ್ಲಿರುವ ದೇವರಾಜ ಅರಸು ಕಾಲನಿಯ ಗಾಜಿನ ಮನೆಯಲ್ಲಿ ನಮೋಕಾರ ಮಂತ್ರ ಪಠಣ ಕಾರ್ಯಕ್ರಮ ನಡೆಯಿತು
ಬುಧವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಭಗವಾನ್ ಮಹಾವೀರ 1008 ತೀರ್ಥಂಕರರ ಫೋಟೋಗೆ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ಆ ನಂತರ” ಜೈ ಜಿನೇಂದ್ರ ನಮೋ ಅರಿಹಂತಾನಂ ನಮೋ ಸಿದ್ಧಾನಂ ನಮೋಕರ್”ಎಂಬ ಮಹಾಮಂತ್ರವನ್ನು ನೆರೆದಿದ್ದವರೆಲ್ಲರೂ ಪಠಿಸಿದರು. ಜೈನ ಸಮಾಜದ ಮುಖಂಡ ನೇಮಿನಾಥ ಚೌಗಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಆರ್ಸ್ ಕಾಲೋನಿಯ ಮಹಿಳಾ ಮಂಡಳದಿಂದ ಎಂ.ಟಿ.ಪಾಟೀಲ, ಸಂಜೀವ ಅಕ್ಕಿ, ನೂತನ್ ಮಜಗಾವಿ, ಮಹಾವೀರ ಪಾಟೀಲ, ಪಾರೀಸನಾಥ ಕರಡಿ, ಹೀರಾಚಂದ ಕಲ್ಮನಿ, ದಯಾನಂದ ಪಾಟೀಲ, ಬಸವಂತ ಪಾಟೀಲ, ಯೇಗಪ್ಪ ನರಸಿಂಗನವರ, ಜೈಪಾಲ ಚೌಗಲಾ, ರಾಜಕುಮಾರ ಪಾಟೀಲ, ಬಸವರಾಜ ಚೌಗಲಾ, ದೇವರಾಜ್ ಇದ್ದರು.
Laxmi News 24×7