Breaking News

ಬೆಳಗಾವಿಗರಿಗೆ ಸಿಹಿ ಸುದ್ಧಿ… ಹೊಸ ಶಾಖೆ ಆರಂಭಿಸಿದ “ ಡ್ರೈಫ್ರೂಟ್ಸ್ ಹೌಸ್”…ಆಕರ್ಷಕ ಆಫರ್..!

Spread the love

ಬೆಳಗಾವಿ: ಬೆಳಗಾವಿಯ ಅಯೋಧ್ಯಾನಗರದ ಯು.ಕೆ. 27 ಹೋಟೆಲನ ಪಕ್ಕದಲ್ಲಿ ದೇಶದಲ್ಲೇ ಪ್ರಸಿದ್ಧ ಮತ್ತು ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾದ ಡ್ರೈಫ್ರೂಟ್ ಹೌಸ್ ತನ್ನ ಸೇವೆಯನ್ನು ಆರಂಭಿಸಿದೆ.

ದೇಶ್ಯಾದ್ಯಂತ ಈಗಾಗಲೇ 193 ಬ್ರ್ಯಾಂಚ್ ಹೊಂದಿರುವ ದೇಶ ವಿದೇಶದ ಗುಣಮಟ್ಟದ ಡ್ರೈಫ್ರೂಟ್ಸಗಳನ್ನು ಬೆಳಗಾವಿಗರಿಗೆ ನೀಡಲು ಡ್ರೈಫ್ರೂಟ್ ಹೌಸ್. ತನ್ನ 194ನೇ ಶಾಖೆಯನ್ನು ಕುಂದಾನಗರಿಯಲ್ಲಿ ಆರಂಭಿಸಿದೆ.

ಇಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಅವರ ಪುತ್ರ ಅಮನ್ ಸೇಠ್, ಮುಖ್ಯ ಅತಿಥಿ ಭರತ್ ರಾಠೋಢ್, ಡ್ರೈಫ್ರೂಟ್ಸ್ ಹೌಸನ ಸಂಚಾಲಕರಾದ ಸೋಹೇಲ್, ಸಯ್ಯದ ಮುಸ್ತಫಾ , ವ್ಯವಸ್ಥಾಪಕರಾದ ಅಶೋಕ ಮತ್ತು ಶರಣ ಸೇರಿದಂತೆ ಇನ್ನುಳಿದ ಗಣ್ಯರ ಉಪಸ್ಥಿತಿಯಲ್ಲಿ ನೂತನವಾಗಿ ಕಾರ್ಯಾರಂಭಗೊಳಿಸಿದ ಡ್ರೈಫ್ರೂಟ್ಸ್ ಹೌಸನ ಉದ್ಘಾಟನೆ ನೆರವೇರಿತು.

ಡ್ರೈಫ್ರೂಟ್ಸ್ ಹೌಸನ ಪ್ರತಿಯೊಂದು ಡ್ರೈಫ್ರೂಟ್ಸ್ ಒಳ್ಳೆಯ ಗುಣಮಟ್ಟದ್ದು ಮತ್ತು ತಾಜಾ ಇರುತ್ತವೆ. ದೇಶಾದ್ಯಂತ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರವಾದ ಡ್ರೈಫ್ರೂಟ್ಸ್ ಹೌಸ್ ಬೆಳಗಾವಿಗರ ಪ್ರೀತಿಯನ್ನು ಗಳಿಸಿ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಸಂಚಾಲಕರಿಗೆ ಶುಭ ಹಾರೈಸಿದರು.

ಆರೋಗ್ಯಕರ ಚಾಕಲೇಟ್ಸ್, ಡ್ರೈಫ್ರೂಟ್ಸ್ ಸೇರಿದಂತೆ ವಿವಿಧ ಪ್ರಕಾರದ ಉತ್ಪನ್ನಗಳು ಇಲ್ಲಿ ಸಿಗುತ್ತಿದ್ದು, ಬೆಳಗಾವಿಗರು ತಪ್ಪದೇ ಭೇಟಿ ನೀಡಿರಿ ಎಂದು ಅಮನ್ ಸೇಠ್ ಕರೆ ನೀಡಿದರು. 

ಡ್ರೈಫ್ರೂಟ್ಸ್ ಹೌಸ್ ತನ್ನ ಅದ್ಧೂರಿ ಉದ್ಘಾಟನೆಯ ಹಿನ್ನೆಲೆ ರೂಪಾಯಿ 1999ಕ್ಕೂ ಹೆಚ್ಚಿನ ಖರೀದಿದಾರಿಯನ್ನು ಮಾಡುವ ಗ್ರಾಹಕರಿಗೆ ಆಕರ್ಷಕ ಬಹುಮಾನವನ್ನು ನೀಡುತ್ತಿದೆ.

ಇಲ್ಲಿ ವಿವಿಧ ಪ್ರಕಾರದ ಡ್ರೈಫ್ರೂಟ್ ಇರಾನ್ ಆಲಮಂಡ್, ಕ್ಯಾಲಿಫೋರ್ನಿಯಾ ಜಂಬೋ ಆಲಮಂಡ್, ಪಿಸ್ತಾ ಸಾಲ್ಟೇಡ್, ಪ್ಲೇನ್ ಪಿಸ್ತಾ, ವಾಲನಟ್, ಎನರ್ಜಿ ಬೂಸ್ಟರ್ ಐಟಂ, ಮಿಕ್ಸ್ ಡ್ರೈಫ್ರೂಟ್ಸ್, ಚಟಪಟಾ ನಟ್ಸ್, ಒಣ ದ್ರಾಕ್ಷಿ, ಕಪ್ಪು ದ್ರಾಕ್ಷಿ, ಗೋಡಂಬಿ,ಬದಾಮ್, ಖಾರಿಕ್, ಸ್ಟ್ರಾಬೇರಿ, ಬ್ಲೂಬೇರಿ, ಪೀಚ್ ಫ್ರೂಟ್, ಟುಟಿ ಫ್ರೂಟಿ, ಫ್ರೇಂಚ್ ಫ್ರೂಟ್, ಮಸಾಲೆಗಳು, ಚಾಕಲೇಟ್ಸ್ ಸೇರಿದಂತೆ ಇನ್ನೂ ಹಲವಾರು ಉತ್ಪನ್ನಗಳು ದೊರೆಯುತ್ತವೆ 

ಹೊಸ ವರ್ಷದ ಶುಭಾಷಯ ಕೋರಲು ನೀವು ಕೂಡ ಬೆಳಗಾವಿಯ ಅಯೋಧ್ಯಾನಗರದ ಯು.ಕೆ. 27 ಹೋಟೆಲನ ಪಕ್ಕದಲ್ಲಿ, ಸಿವಿಲ್ ಹಾಸ್ಪಿಟಲ ರೋಡ, ಬೆಳಗಾವಿ ಇಲ್ಲಿ ಭೇಟಿ ನೀಡಿ ಡ್ರೈಫ್ರೂಟ್ಸಗಳನ್ನು ಖರೀದಿಸಿ, ಹೊಸ ವರ್ಷದ ಖುಷಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿರಿ.


Spread the love

About Laxminews 24x7

Check Also

ಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿ

Spread the loveಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ