Home / ರಾಜಕೀಯ / ಕಾಲೇಜಿನಲ್ಲಿ ಮೇಳೈಸಿದ ‘ಗ್ರಾಮ ಸಂಭ್ರಮ’ ಪಂಚೆ, ಕುರ್ತಾ ತೊಟ್ಟು ಹೆಗಲ ಮೇಲೊಂದು ಶಲ್ಯ ಹಾಕಿಕೊಂಡು ಯುವಕರು ಬಂದರೆ, ಸೀರೆ, ರವಿಕೆ, ಮೂಗನತ್ತು, ಜಡೆಗೆ ಮಲ್ಲಿಗೆ ಮುಡಿದು ಯುವತಿಯರು

ಕಾಲೇಜಿನಲ್ಲಿ ಮೇಳೈಸಿದ ‘ಗ್ರಾಮ ಸಂಭ್ರಮ’ ಪಂಚೆ, ಕುರ್ತಾ ತೊಟ್ಟು ಹೆಗಲ ಮೇಲೊಂದು ಶಲ್ಯ ಹಾಕಿಕೊಂಡು ಯುವಕರು ಬಂದರೆ, ಸೀರೆ, ರವಿಕೆ, ಮೂಗನತ್ತು, ಜಡೆಗೆ ಮಲ್ಲಿಗೆ ಮುಡಿದು ಯುವತಿಯರು

Spread the love

ನ್ನಮ್ಮನ ಕಿತ್ತೂರು: ಪಂಚೆ, ಕುರ್ತಾ ತೊಟ್ಟು ಹೆಗಲ ಮೇಲೊಂದು ಶಲ್ಯ ಹಾಕಿಕೊಂಡು ಯುವಕರು ಬಂದರೆ, ಸೀರೆ, ರವಿಕೆ, ಮೂಗನತ್ತು, ಜಡೆಗೆ ಮಲ್ಲಿಗೆ ಮುಡಿದು ಯುವತಿಯರು ಆಗಮಿಸಿದ್ದರು. ‘ಶರಣ್ರೀ ಯಪ್ಪಾ.. ಬನ್ನಿ’ ಎಂದು ಆತ್ಮೀಯವಾಗಿ ಬರಮಾಡಿಕೊಂಡರು.

ಇದು ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಗ್ರಾಮ ಸಂಭ್ರಮ’ದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದ ಪರಿ.

 

ಎತ್ತಿನ ಬಂಡಿ ಕಟ್ಟಿಕೊಂಡು ವಿದ್ಯಾರ್ಥಿಗಳು ಕಾಲೇಜಿನವರೆಗೆ ಬಂದು ನಲಿದರು. ಸಜ್ಜಿರೊಟ್ಟಿ, ಎಣ್ಣೆಗಾಯಿ ಬದನೆ, ಹಿಟ್ಟಿನ ಚಕಳಿ, ಗುರೆಳ್ಳು, ಪುಟಾಣಿ ಚಟ್ನಿ, ಕೆನೆ ಮೊಸರು, ಮಾದ್ಲಿ ಸೇರಿ ವಿವಿಧ ಬಗೆಯ ಖಾದ್ಯ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ಅತಿಥಿಗಳಿಗೆ ಉಣಬಡಿಸಿ, ತಾವೂ ಉಂಡು ಖುಷಿಪಟ್ಟರು.

‘ಗ್ರಾಮ ಸಂಭ್ರಮ’ದಲ್ಲಿ ಪಾಲ್ಗೊಂಡಿದ್ದ ಜನಪದ ತಜ್ಞ, ಕಲಾವಿದ ರಾಮು ಮೂಲಗಿ, ‘ಜಾನಪದ ಹಾಡುಗಳಲ್ಲಿ ಜಾನಪದ, ಜನಪ್ರಿಯ ಜಾನಪದ ಹಾಗೂ ಖೋಟಾ ಜಾನಪದ ಎಂಬ ಮೂರು ವಿಧಗಳಿವೆ. ಜನರ ಬಾಯಿಯಿಂದ ಬಾಯಿಗೆ ಬಂದವುಗಳು ಜಾನಪದ, ಪ್ರಸಿದ್ಧ ಸಾಹಿತಿಗಳು ಬರೆದವು ಜನಪ್ರಿಯ ಜಾನಪದ ಮತ್ತು ಈಗ ಬರುತ್ತಿರುವುದು ಖೋಟಾ ಜನಪದ ಹಾಡುಗಳಾಗಿವೆ. ಮೂಲ ಜಾನಪದಗಳಾದ ಗೀಗಿ, ಲಾವಣಿ, ಬೀಸುವ, ಹಂತಿ ಪದಗಳನ್ನು ವಿದ್ಯಾರ್ಥಿಗಳು ಕಲಿಯಬೇಕು. ಖೋಟಾ ಜಾನಪದ ಹಾಡುಗಳಿಗೆ ಮಾರು ಹೋಗಬಾರದು’ ಎಂದು ಮನವಿ ಮಾಡಿದರು. ತಮ್ಮ ಮಾತುಗಳ ಮಧ್ಯೆ ಜಾನಪದ, ತತ್ವಪದಗಳನ್ನು ಹಾಡಿ ರಂಜಿಸಿದರು.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ